ಸ್ನೇಹದ ತಿರುಳು

Share Button

.
ಮೋಸ ಬೇಡ ಮನುಜ
ನೀ ಬಾಳಬೇಕು ಸಹಜ

ಮೋಸ ವಂಚನೆ ಬೇಡ ಎಮಗೆ
ದ್ರೋಹಿಯಾಗಬೇಡ
ವೇಷ ಮರೆಸಿ ಬಣ್ಣ ಬದಲಿಸಿ
ಮಾತು ಮರೆಸಬೇಡ

ನಿನ್ನ  ನಂಬಿದ ಜೀವಗಳಿಗೆ
ಕಣ್ಣೀರು ಇಡಿಸಬೇಡ
ಚುಚ್ಚುಮಾತು ಬಲುಕುತ್ತು ತರುವುದು
ಒಮ್ಮೆ ಅರಿತು ನೋಡ

ನಂಬಿಕೆಯಲಿ ಜೀವ ನಡೆಸು ನೀ
ವೈರತ್ವ ಗಳಿಸಬೇಡ
ವಿಶ್ವಾಸಭರಿತ ಪ್ರೀತಿಯಿಂದ
ಸ್ನೇಹ  ಗಳಿಸಿ ನೋಡ

ಹಮ್ಮು ಬಿಮ್ಮು ತೊರೆದು ಬಿಟ್ಟು
ಅಭಿಮಾನಿ ಬಳಗ ನೋಡ
ಎಲ್ಲರೊಳುಗೊಂದಾಗಿ ಬದುಕುತ
ಸ್ನೇಹ ಮಧುರ ನೋಡ

ನಾನು ನಮ್ಮದು ಎಂಬ ಮಾತು
ದೂರ ಸರಿಸಿ ನೋಡ
ನಾವು ನಮ್ಮದು ನಮ್ಮದೆಲ್ಲವು
ಎಂದ ಬಾಳು ಪಾಡ

-ಮಧುಮತಿ ರಮೇಶ್ ಪಾಟೀಲ್, ಬಳ್ಳಾರಿ

4 Responses

  1. Meghana Kanetkar says:

    ಅರ್ಥಗರ್ಭಿತ ಕವನ

  2. ನಯನ ಬಜಕೂಡ್ಲು says:

    ಸಹಜ ಬದುಕನ್ನು ಬಾಳು ಎಂಬ ಸುಂದರ ಸಂದೇಶ

  3. ಶಂಕರಿ ಶರ್ಮ says:

    ಸಹಜ ಸುಂದರ ಬಾಳಿನ ಪರಿಯನ್ನು ಮನಮುಟ್ಟುವಂತೆ ಬಿಂಬಿಸಿದ ಕವನ ಬಹಳ ಸೊಗಸಾಗಿದೆ.

  4. Savithri bhat says:

    ನೀತಿ ಕವನ ಚೆನ್ನಾಗಿದೆ

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: