ನಾಳೆಗಾಗಿ

Share Button

ಸತ್ತ ನೆನ್ನೆಯ ಶವಗಳೆದುರಿಗೆ
ಕಣ್ಣೀರ್ಗರೆದು ನರಳಿ
ಹೊರಳಾಡುವುದೇಕೆ?
ಸತ್ತ ನೆನ್ನೆಗಳ ರಾಶಿಯಲಿ
ಜೀವಂತಿಕೆಯ ಬೆದಕಿ
ದಕ್ಕಿದ ಜೀವದ್ರವವ
ನಿರ್ಭಾವಗಳಿಗೆ ಲಸಿಕೆಯಾಗಿಸಿ
ವರ್ತಮಾನದ ಸುಳ್ಳು ಭರವಸೆ
ಪೊಳ್ಳು ಬಾಳಿನ
ಬೂಟಾಟಿಕೆಗೆ, ನಯವಂಚಕತನಕೆ
ಕೊಕ್ ಕೊಟ್ಟು ಸೆಟೆಯುವ ಬದಲಿಗೆ
ನಗುವ ಲೇಪಿಸಿಕೊಳಬಾರದೇಕೆ?

ತಾನೇ ಬಿತ್ತಿಕೊಂಡ ಬೇಗುದಿಗಳ
ಉಸಿರಗಟ್ಟಿಸಿ
ಹೆಸರಿಲ್ಲದಂತೆ ಹೆಡೆಮುರಿ ಕಟ್ಟಿ
ಮಸಣಕೆಸೆದು
ಮನೋಹರಗಳ ಮುಸುಕದೆರೆದು
ಮಾಸಿದ ಕಂದಿದ
ಕೆಂದಾವರೆಯ ಮೊಗಕೆ
ಬಾವಿಗಿಳಿದ ನಯನಗಳಿಗೆ
ಒಂದರೆಘಳಿಗೆ ಮುದವ ಸವರುವ
ಬಾರೇ…..ನೆನ್ನೆಗಳ ನನಸೇ…….

-ಬಿ.ಕೆ.ಮೀನಾಕ್ಷಿ, ಮೈಸೂರು.

5 Responses

  1. Dharmanna dhanni says:

    ಕವನ ಚೆನ್ನಾಗಿದೆ. ಧನ್ಯವಾದಗಳು

  2. ಬಿ.ಆರ್.ನಾಗರತ್ನ says:

    ವಾಹ್ ಅರ್ಥಪೂರ್ಣ ವಾಗಿದೆ ಕವನ ಹೌದು ಭರವಸೆಯೇ ಬಾಳಿನ ಬೆಳಕು ಒಳ್ಳೆಯ ಸಂದೇಶ ಹೊತ್ತು ಒಡಮೂಡಿದ ಕವನ.ಚಿಂತನೆಗೆ ಹಚ್ಚುವ ಕವನ.ಅಭಿನಂದನೆಗಳು ಗೆಳತಿ ಮೀನಾ.

  3. ನಯನ ಬಜಕೂಡ್ಲು says:

    ನೋವು ಕೊಡುವ ವಿಚಾರಗಳನ್ನು ಮರೆತು ಸಾಗಿದಷ್ಟು ನೆಮ್ಮದಿ.

  4. Meghana Kanetkar says:

    ಹೌದು. ನೋವು ತರುವ ನಿನ್ನೆಯ ನೆನಪುಗಳು ಬೇಕೆ?
    ಅರ್ಥಪೂರ್ಣ ಕವನ

  5. ASHA nooji says:

    ಕವನಸೂಪರ್ ಅಮ್ಮಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: