ವಿವೇಕಾನಂದ 

Share Button

ಮನದ ಒಳಗಡೆ ಬೆಂಕಿ ಕಿಡಿ ಹೊತ್ತಿಸಿ
ಧರ್ಮಕ್ಕೆ ಹೊಸ ವ್ಯಾಖ್ಯಾನ ಬರೆದುದಾನಂದ
ಶಬ್ದಗಳನ್ನೆಲ್ಲ ಶಸ್ತ್ರವಾಗಿಸಿ
ವೀರ ಸನ್ಯಾಸಿಯಾದ ವಿವೇಕಾನಂದ॥

ಬಡವರೊಳಗಡೆ ದೇವರ ಕಂಡು
ಎಲ್ಲರಿಗೂ ಗೌರವದಾನಂದ
ಕೇಸರಿ ತೊಟ್ಟರೂ ಕ್ಷಾತ್ರ ತೇಜದ ನುಡಿಗಳು
ವೀರ ಸನ್ಯಾಸಿ ವಿವೇಕಾನಂದ ॥

ತರುಣ ಜನಾಂಗಕೆ ನಾಯಕ ಮೂರ್ತಿ
ಹೃದಯಾಂಗಣದಲಿ ತುಂಬಿದ ಅಭಯದಾನಂದ
ಸ್ಫೂರ್ತಿಯ ಸೆಲೆಯನು ಸಾಗರವಾಗಿಸಿ
ಧುಮುಕಿಸಿದೆಲ್ಲರದರಲಿ ವಿವೇಕಾನಂದ ॥

ಬದುಕಿದ ದಿನಗಳು ತುಂಬಾ ಕಡಿಮೆ
ಬದುಕಿದಷ್ಟು ದಿನ ಸಿಂಹದ ಬದುಕಿನಾನಂದ
ಸೇವೆಯೇ ಶಿವನನು ತೋರುವ ಮಾರ್ಗ
ಕೇಸರಿ ಕ್ರಾಂತಿ ವಿವೇಕಾನಂದ ॥

-ಇಂದ್ರ, ಬೆಳಗಾವಿ 

2 Responses

  1. ನಯನ ಬಜಕೂಡ್ಲು says:

    ಬದುಕಲ್ಲಿ ಭರವಸೆಯನ್ನು ತುಂಬುವಂತದ್ದು ವಿವೇಕಾನಂದರ ಪ್ರತಿಯೊಂದು ಮಾತು. ಸೋತೆ ಅನ್ನಿಸುವಾಗ, ಇಲ್ಲ, ಏನೂ ಮುಗಿದಿಲ್ಲ, ಇದೀಗ ಆರಂಭವಷ್ಟೇ ಅನ್ನುವುದನ್ನು ಅವರ ಸ್ಫೂರ್ತಿ ತುಂಬುವ ಮಾತುಗಳಲ್ಲಿ ನಾವು ಕಾಣಬಹುದು.

  2. ಶಂಕರಿ ಶರ್ಮ says:

    ನಮ್ಮ ದೇಶದ ವೀರಸನ್ಯಾಸಿ, ಸ್ವಾಮಿ ವಿವೇಕಾನಂದರ ಸ್ಪೂರ್ತಿಯುತ, ಮಾಣಿಕ್ಯದಂತಹ ಮಾತುಗಳು ಎಂದೆಂದಿಗೂ ಪ್ರಸ್ತುತ. .. ಸೊಗಸಾದ ಕವನ..ಧನ್ಯವಾದಗಳು.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: