ಮೇರು_ಕನಕ

Share Button

ವ್ಯಾಸರು ಮೆಚ್ಚಿದ
ದಾಸರ ಪಂಕ್ತಿಯ
ಮೋಸವನರಿಯದ ಮುಗ್ಧರಿಗೆ
ತೋಷದಿ ಪರೀಕ್ಷೆ
ದಾಸರುವಿಟ್ಟರು
ಬೇಸರ ತೋರಿದ ಶಿಷ್ಯರಿಗೆ||

ಬಾಳೆಯ ಫಲವನು
ಕಾಳಗೆ ಕಾಣದೆ
ಕಾಳಜಿಯಿಂದಲಿ ಸವಿರೆಲ್ಲ
ಕಾಳನುವಿಲ್ಲದ್
ಸ್ಥಳವದುವಿಲ್ಲವು
ಹೇಳಿದ ಸುಂದರ ಜಗಮಲ್ಲ||

ಬಚ್ಚಮ ತನಯನು
ಕೆಚ್ಚೆದೆ ಶೂರನು
ಹೆಚ್ಚಿತು ಕೀರ್ತಿಯು ಮನೆತನದು
ರೊಚ್ಚಿಗೆ ಬರುವನು
ಚುಚ್ಚುತ ವೈರಿಯ
ಕೊಚ್ಚುತ ಚಣದಲಿ ಮಧಿಸುವನು||

ತಿಮ್ಮಪ್ಪ ವರನಿವ
ತಿಮ್ಮಪ್ಪ ನಾಯಕ
ಬಿಮ್ಮಿನ ಬೀರಪ್ಪ ಸುಪುತ್ರನು
ಸುಮ್ಮನೆ ಕೆಣಕುವ
ಹಮ್ಮಿನ ಹಗೆಗಿವ
ಗುಮ್ಮನ ತರದಲಿ ಕಾಡುವನು ||

ರಾಮನ ಧಾನ್ಯದ
ನೇಮವ ಪೊಗಳಿದ
ಧಮಯಂತಿ ನಳರ ಕೃತಿರಚಿಸಿ
ರಾಮನ ಭಕ್ತನು
ತಾಮಸ ಗುಣದವ
ನಾಮದಿ ಕನಕವ ನೀ ಗಳಿಸಿ||

-ಶ್ರೀ ಈರಪ್ಪ ಬಿಜಲಿ

4 Responses

  1. ಈರಪ್ಪ ಬಿಜಲಿ says:

    ಸಂಪಾದಕೀಯ ಮಂಡಳಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಸರ್

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಶಂಕರಿ ಶರ್ಮ says:

    ಕನಕದಾಸರ ಬಗೆಗಿನ ಸೊಗಸಾದ ಸಕಾಲಿಕ ಕವನ..ಧನ್ಯವಾದಗಳು.

  4. Dharmanna dhanni says:

    ಸುಂದರವಾದ ಕವನ. ಕನಕನ ವರ್ನನೆ ಅದ್ಬುತ

Leave a Reply to Dharmanna dhanni Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: