ಬೆಳಕ ಮಾರುವವರು

Share Button

 

 

 

 

 

ದೀಪಾವಳಿಯ ದಿನ ಬುಟ್ಟಿಯಲಿ ಬೆಳಕ ಹೊತ್ತು
ಮಾರುತ್ತಾ ಬಂದರು.
ಬಾಗಿಲಲಿ ನಿಂತ ನನಗೆ
ಕಡ ಕೊಡುವೆನು ಬೆಳಕನು ಬೇಕೇ? ಎಂದರು
ಸುತ್ತಲಿದ್ದವರು ತಮ್ಮೆದೆಯ ಬೆಳಕ ಕುಡಿಯ ಕಿತ್ತು
ಉಡಿ ತುಂಬುವುವೆಂದರು.
ಕಣ್ಣಲಿದ್ದ ಬೆಳಕನು ನಗೆಯಲೊಂದಷ್ಟು ತುಳುಕಿಸಿ
ಹಿಡಿದುಕೊಳ್ಳಿ ಬೊಗಸೆಯಲಿ ಎಂದರು
ಕೈ ಸುಟ್ಟು ನಿಮಗೂ ಪಾಡು ನನಗೂ ಪಾಡು
ಬೇಡವೆಂದೆ

ಅಯ್ಯೋ ದಡ್ಡೀ..ಬೆಳಕು ಸುಡುವುದೆಂದು ಹೇಳಿದವರಾರು?
ನಾವು ಕೊಡುವುದು ಬೆಳಕನ್ನು….. ಬೆಂಕಿಯಲ್ಲ!
ಖಾಲಿ ಎದೆಯ ಗೂಡಿನಲಿ, ಕತ್ತಲೆಯ ಭಿತ್ತಿಗಳಲಿ
ಧಮನಿಗಳನೊಂದಷ್ಟು ಹೊಸೆದು ಜೀವರಾಗವ ತುಂಬಿ
ಕಣ್ಣ ಪಾಪೆಯಲಿ ಕಾಣದಾಗಿಹ ಗೊಂಬೆಯ ಹುಡುಕು
ನಾವಿತ್ತ ಹಣತೆಯಲಿ, ಬೆಳಗಿಕೊಂಡು
ಮತ್ತೆ ಹಿಂದಿರುಗಿಸು
ಮಂಕಳಂತೆ ಮುದುರಿ ಕೂರುವುದೇಕೆ?
ಬೆಳಕು……
ನಿನ್ನ ಹಕ್ಕು!

ಬಲಿ ಬರುವನು, ನರಕನು ನಲಿವನು
ಮಂಗಳದ ಮಹಾಲಕ್ಷ್ಮಿ ಹೆಜ್ಜೆಯಿಡುವಳು
ನೀರು ತುಂಬಿಲ್ಲವೇ?
ಕಜ್ಜಾಯ ಕರಿದಿಲ್ಲವೇ ಇನ್ನೂ?
ಹೋಗು ಹೋಗು ಸಿದ್ಧ ಮಾಡು
ಒಂದಿಷ್ಟು ಬೆಳಕ ಹೊತ್ತಿಸಿ ಮನ ಬೆಳಗಿ
ಕತ್ತಲೆಯ ಕಾಣದಾಗಿಸು.
ನೀನೂ ನಾಳೆ
ಕಡ ಕೊಡುವೆಯಂತೆ
ಬೆಳಕಿಲ್ಲದವರಿಗೆ….. ಬೆಳಕಿಗಾಗಿ ಕಾಯುವವರಿಗೆ!

– ಬಿ.ಕೆ.ಮೀನಾಕ್ಷಿ, ಮೈಸೂರು.

6 Responses

  1. Anonymous says:

    ಬೆಳಕ ಮಾರುವವರು ಕವನ ಬಹಳ ಅರ್ಥಪೂರ್ಣ ವಾದ ಕವನ ನಾವು ಕೊಡುವುದು ಬೆಳಕನ್ನು ಬೆಂಕಿಯನ್ನಲ್ಲ ಎನ್ನುವಲ್ಲೇ ಬದುಕಿ ಗೆ ಭರವಸೆ ನೀಡುವುದು ಬೆಳಕೇ ಹೊರತು ಬೆಂಕಿಯಲ್ಲ..ನೀವು ಅದನ್ನು ತಿಳಿದು ಇನ್ನೊಬ್ಬರ ಬದುಕಿಗೆ ರವಾನಿಸಿ ಎನ್ನುವುದನ್ನು ಸೊಚ್ಯವಾಗಿ .ಕವನದ ಮೂಲಕ ವ್ಯಕ್ತಪಡಿಸಿದ್ದಾರೆ.ಅಭಿನಂದನೆಗಳು ಮೀನಾ.

  2. ನಯನ ಬಜಕೂಡ್ಲು says:

    ಸೊಗಸಾಗಿದೆ ಕವನ

  3. ಶಂಕರಿ ಶರ್ಮ says:

    ಬೆಳಕ ಮಾರುವವರು.. ಬಹಳ ಅರ್ಥವತ್ತಾದ, ಸೊಗಸಾದ ಕವನ.. ಧನ್ಯವಾದಗಳು ಮೇಡಂ.

  4. B.k.meenaksi says:

    ಮೇಡಂ, ನನ್ನ ಕವನ ಬೆಳಕ ಮಾಡುವವರು ಪ್ರಕಟಿಸಿದ್ದಕ್ಕೆ ಧನ್ಯವಾದ ಗಳು.

  5. Dharmanna dhanni says:

    ಅರ್ಥಪೂರ್ಣವಾದ ಕವನ. ಧನ್ಯವಾದಗಳು

  6. Hema says:

    ಸೊಗಸಾದ, ಅರ್ಥಗರ್ಭಿತ ಕವನ..ಇಷ್ಟವಾಯಿತು

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: