ಆಶಯ

Share Button

 

 

 

 

 

 

ದೀಪ ಹಚ್ಚಿರೆಲ್ಲ
ಸಿಡಿವ ಮದ್ದನಲ್ಲ
ಬೆಳಕ ಹರಡಿರಲ್ಲ
ಹೊಗೆಯ ವಿಷವನಲ್ಲ

ಸತ್ತ ನರಕನಿಗೆ
ಮರುಹುಟ್ಟು ಕೊಡದಿರಿ!
ಬಲಿಯು ಬರುವಾಗ
ಇರಲಿ ಶುದ್ಧ ಗಾಳಿ

ಕಿವಿಗಡಚಿಕ್ಕುವ
ಶಬ್ಧವದೇತಕೆ
ದನಕರು ಪ್ರಾಣಿಯ
ಪ್ರಾಣ ಹಿಂಡಬೇಕೆ?

ಗಂಧ ಬೀಸುವೆಡೆ
ಗಂಧಕವೇತಕೆ
ಹಕ್ಕಿಪಿಕ್ಕಿ ಹಾರಿ
ಹಾಹಾಕರಿಸಬೇಕೆ?

ದೀಪಾವಳಿಯಲಿ
ಜಗಮಗಿಸಲಿ ಜಗ
ನಿಲ್ಲಲಿ ಜೀವಿಯ
ಸಂಕಟ ಬೇಗೆ

ಹಬ್ಬ ಬರುವುದೇ
ಹರ್ಷ ಹರಡಲಿಕ್ಕೆ
ಬೆಳಕಲಿ ಮೀಯುತ
ಪ್ರೀತಿ ಹಂಚಲಿಕ್ಕೆ

– ಅನಂತ ರಮೇಶ್ 

6 Responses

  1. ಬಿ.ಆರ್.ನಾಗರತ್ನ says:

    ಉತ್ತಮ ಸಂದೇಶ ನೀಡುವ ಕವನಪಾಲಿಸುವ ಮನಸ್ಸು ಬರಲಿ. ಅಭಿನಂದನೆಗಳು ಸಾರ್.

  2. ನಯನ ಬಜಕೂಡ್ಲು says:

    ಒಳ್ಳೆಯ ಆಶಯ

  3. ಶಂಕರಿ ಶರ್ಮ, ಪುತ್ತೂರು says:

    ಬಹಳ ಉತ್ತಮ ಆಶಯ ಹೊತ್ತ ಸೊಗಸಾದ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: