ನಮ್ಮ ಮೇಷ್ಟ್ರು…

Share Button

ಇದ್ದರೆ ಇರಬೇಕು ನಮ್ಮ ಮೇಷ್ಟ್ರ ಹಾಗೆ
ಆಕಾರದಲ್ಲಿ ವಾಮನ, ಬುದ್ಧಿಯಲ್ಲಿ ತ್ರಿವಿಕ್ರಮ.
ಅವರು ಕಲಿಸಿಕೊಟ್ಟ ಅಕ್ಷರ ಈಗಲೂ ಬಾಯಲ್ಲಿ
ಬರುತ್ತಿವೆ ಸರಬರ, ಹಾಕಿಕೊಟ್ಟರು ಲೆಕ್ಕ
ಭದ್ರವಾಗಿ ಕುಳಿತಿದೆ ಅಕ್ಕಪಕ್ಕ.

ಬಿತ್ತಿದರು ಮನದಲ್ಲಿ ವಿಜ್ಞಾನ
ಬತ್ತದೇ ನಿಂತಿದೆ ಅದರ ಜ್ಞಾನ.
ಬೋಧಿಸಿದರು ಚರಿತ್ರೆಯನ್ನು
ಸದಾ ಮೆಲುಕು ಹಾಕುವಂತಿವೆ
ಆ ಇತಿಹಾಸದ ಕಥೆಗಳ ಮಾಲೆ.
ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದರು
ಆಟ, ಓಟಗಳಲ್ಲೂ ನಮ್ಮ ಮನವ.
ಈಗಲೂ ಬಿಟ್ಟಿಲ್ಲ ಅವುಗಳಲ್ಲಿ
ಭಾಗವಹಿಸುವ ಪರಿಪಾಠವ.

ಎಲ್ಲಕ್ಕೂ ಮಿಗಿಲಾಗಿ ತಿಳಿಸುತ್ತಿದ್ದರು
ನಡೆ ನುಡಿಗಳಲ್ಲಿ ವಿಧೇಯತೆಯ.
ಪರಿಚಯಿಸಿದರು ಜೀವನದ ಮೌಲ್ಯ
ಅದಕ್ಕೇ ಇಂದಿಗೂ ಸಲ್ಲಿಸುತ್ತೇನೆ
ಅವರಿಗೊಂದು ನಮನ.
ಸದಾ ಕಾಲ ನೆನೆಯುತ್ತೇನೆ
ಅವರು ಕಲಿಸಿದ ಪಾಠವನ್ನೇ
ಅಳವಡಿಸಿಕೊಂಡು ನಡೆಸಿದ್ದೇನೆ
ನನ್ನ ಇಂದಿನವರೆಗಿನ ಜೀವನ.

-ಬಿ.ಆರ್.ನಾಗರತ್ನ. ಮೈಸೂರು.

10 Responses

  1. ನಯನ ಬಜಕೂಡ್ಲು says:

    ಈ ಬಾಳೆಂಬ ಪಯಣದಲ್ಲಿ ಬೆಳಗುವ ಹಣತೆಯಂತೆ ಎಲ್ಲಾ ಗುರುಗಳು

  2. ಎಚ್.ಆರ್.ಲೀಲಾವತಿ says:

    ಅಜ್ಞಾನದ ತಿಮಿರ ಕಳೆದು, ಸುಜ್ಞಾನದ ಜ್ಯೋತಿ ಬೆಳಗುವ ಸದ್ಗುರುವಿನ ಚರಣ ಕಮಲದಲ್ಲಿ ನಾನೊಂದು ಮರಿದುಂಬಿ.

  3. Savithri bhat says:

    ಸುಂದರ ಗುರು ನಮನ

  4. ಶಂಕರಿ ಶರ್ಮ says:

    ಭಾವಪೂರ್ಣ ಗುರುನಮನ ತುಂಬಾ ಚೆನ್ನಾಗಿದೆ.

  5. Krishnaprabha says:

    ಗುರುಗಳು ಕಲಿಸಿದ ವಿದ್ಯೆ, ಎಂದಿಗೂ ಮರೆಯಲಾಗದು

  6. ಮಾಲತಿ says:

    ಓಂ ಗುರುಭ್ಯೊ ನಮಃ

  7. ಪದ್ಮಾ ವೆಂಕಟೇಶ್ says:

    ಗುರುನಮನ

  8. ಬಿ.ಆರ್.ನಾಗರತ್ನ says:

    ನನ್ನ ಕವನ ಓದಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿದವರೆಲ್ಲರಿಗೂ ನನ್ನ ವಂದನೆಗಳು.

  9. ಪದ್ಮ ಆನಂದ್ says:

    ಮನದಲ್ಲಿ ಜ್ಣಾನದ ಬೀಜವ ಬಿತ್ತಿ ನೀರೆರದು ಪೋಷಿಸಿದ ಗುರುನಮನ ಸುಂದರವಾಗಿ ಮೂಡಿಬಂದಿದೆ. ಅಭಿನಂದನೆಗಳು, ನಾಗರತ್ನ ನಿಮಗೆ.

  10. ಪದ್ಮ ಆನಂದ್ says:

    ಮನದಲ್ಲಿ ಜ್ಞಾನದ ಬೀಜವ ಬಿತ್ತಿ, ನೀರೆರದು ಪೋಷಿಸಿದ ಗುರುವಂದನೆಯ ಚಂದದ ಕವಿತೆ.

Leave a Reply to ಎಚ್.ಆರ್.ಲೀಲಾವತಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: