ನನ್ನ ದೇವರು….

Share Button

ಆಜಾನು ಸುಪ್ರಭಾತ ಕೇಳಿ
ಎದ್ದೇಳಿ ಏಳಿ ಎಂದು ಜನರನ್ನೂ
ತನ್ನನ್ನೂ ಎಚ್ಚರಿಸಿಕೊಳ್ಳಲು
ನನ್ನ ದೇವರೆಂದೂ ಮಲಗಿಲ್ಲ.

ಹಾಲು ಮಜ್ಜನ, ತೀರ್ಥ ನೈವೇದ್ಯ
ಉಪಚಾರ ಪಡೆದು; ಘಳಿಗೆ ನೋಡಿ
ಬಾಗಿಲು ತೆಗೆಯಲು ನನ್ನ ದೇವರೆಂದೂ
ಗುಡಿಯ ಮೂರ್ತಿಯಾಗಿಲ್ಲ.

ಧೂಪ ದೀಪ ಮಂಗಳಾರತಿಗೆ
ಪ್ರಸನ್ನವಾಗಿ ಸಾಲುನಿಂತ ಭಕ್ತಗಣ
ಪರಿವಾರಕೆ ದರ್ಶನ ಕೊಡಲು
ನನ್ನ ದೇವರೆಂದೂ ಒಂದೆಡೆ ನಿಂತಿಲ್ಲ.

ಕಷ್ಟ ಕಾಲದಲ್ಲೂ ಹೂಹಾರ
ಚಿನ್ನಬೆಳ್ಳಿ ಅಲಂಕಾರ; ವೃಥಾ
ವ್ರತ-ನೇಮಗಳ ಪುರಸ್ಕಾರ
ನನ್ನ ದೇವರೆಂದೂ ಅಪೇಕ್ಷಿಸುವುದಿಲ್ಲ

ತಾನು ಘನವಂತನೆಂದೂ, ಮಹಾ
ಮಹಿಮನೆಂದೂ, ಸರ್ವರೊಳಿತಿನ
ಉದ್ಧಾರಕನೂ, ದೇವರ ಪ್ರತಿನಿಧಿ
ಪ್ರವಾದಿಯೂ ತಾನೆಂದು  ಪ್ರವರ ಹೇಳಿಲ್ಲ.

ನನ್ನ ದೇವರಿಗೆ ಕತ್ತಲಲ್ಲೂ ಕರುಣೆ;
ನಿಮಿತ್ತದಲ್ಲೂ ಸೈರಣೆಯಿದೆ. ಎಲ್ಲಕ್ಕೂ
ಮಿಗಿಲಾಗಿ ಮಿಡಿವ ಹೃದಯದೊಡನೆ
ಸ್ವಲ್ಪ ಹೆಚ್ಚೇ ವಿವೇಕವೂ ಇದೆ.

– ವಸುಂಧರಾ ಕದಲೂರು

5 Responses

  1. Samatha says:

    ಚಂದದ ಕವನ

  2. ಬಿ.ಆರ್.ನಾಗರತ್ನ says:

    ವಾವ್ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಪಡಿಮೂಡಿಸಿರುವ ಕವನ.ಚೆನ್ನಾಗಿದೆ

  3. ನಯನ ಬಜಕೂಡ್ಲು says:

    ವಾಹ್… ಬಹಳ ಅರ್ಥಪೂರ್ಣ ಕವಿತೆ.

  4. ಶಂಕರಿ ಶರ್ಮ says:

    ಭಗವಂತ ಸರ್ವವ್ಯಾಪಿ…ನಿರ್ಮೋಹಿ, ನಿರ್ಗುಣಿ. ಮಾನವನ ಢಂಬಾಚಾರದ ಪ್ರವೃತ್ತಿಯನ್ನು ಸೊಗಸಾಗಿ ಬಿಚ್ಚಿದೆ ನಿಮ್ಮ ಕವನ.

  5. ವಿದ್ಯಾ ಶ್ರೀ ಎಸ್ ಅಡೂರ್ says:

    ಭಗವಂತ ಸರ್ವಾಂತರ್ಯಾಮಿ ಎಂಬ ಉಕ್ತಿಗೆ ಒಪ್ಪುವ ಕವನ. ತುಂಬಾ ಇಷ್ಟವಾಯಿತು.

Leave a Reply to ವಿದ್ಯಾ ಶ್ರೀ ಎಸ್ ಅಡೂರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: