ಮೊರೆ

Share Button

ಜಂತಿ ಮನೆಯ ಕಟ್ಟಿಸಿರುವೆ
ಕಿಟಿಕಿ ದ್ವಾರ ತೆರೆದೆ ಇರುವೆ
ಬಾ ಮನೆಗೆ ಬಾ
ಹುಳದ ಅವರೆಯನ್ನೆ ತರುವೆ
ಶಾಲಿ ಕಾಳು ಚೆಲ್ಲಿಬಿಡುವೆ
ಬಾ ಮನೆಗೆ ಬಾ

ನಾಲ್ಕೇ ಆದರೇನು ಸೆಳೆಯೆ
ಹತ್ತಿ ಬಿತ್ತಿ ಕೊಯ್ಯದಿರುವೆ
ಬಾ ಮನೆಗೆ ಬಾ
ಹಿತ್ತಿಲಲ್ಲಿ ಒಣಗಿ ತೃಣವು
ವಸತಿಯಾಗೆ ಕಾಯುತಿಹುದು
ಬಾ ಮನೆಗೆ ಬಾ

ಗೂಡು ಕಿತ್ತು ಎಸೆವುದಿಲ್ಲ
ಕೊಳಕು ಎಂದು ಮುನಿವುದಿಲ್ಲ
ಬಾ ಮನೆಗೆ ಬಾ
ಗದ್ದಲವಿದೆನದೆ ನಲಿವೆ
ಸುಕೃತ ಸುಪ್ರಭಾತವೆನುವೆ
ಬಾ ಮನೆಗೆ ಬಾ

ಚಿತ್ರ ನೋಡಿ ಬೇಸರಾಗಿ
ಅತ್ತಲೆಸೆದು ಹೋಗುತಿಹರು
ಬಾ ಮನೆಗೆ ಬಾ
ವಸ್ತು ಸಂಗ್ರಹದಿ ಕಂಡು
ಬೆಚ್ಚುತೆದೆಯು ಬಿರಿಯುತಿಹುದು
ಬಾ ಮನೆಗೆ ಬಾ

ಇರುವೆಯೆಲ್ಲೊ ಉಸಿರು ಹಿಡಿದು
ಚರಮಗೀತೆಯಾಗದಿರಲಿ
ಬಾ ಮನೆಗೆ ಬಾ
ಬೂದಿಯಿಂದ ಎದ್ದುಬರುವ
ಕವಿಸಮಯದ ಜೀವಿಯಿಲ್ಲ
ಗಳಹಲೇತಕೆ

ಎಣಿಕೆಗಳವೆ ಅಳಿಸಿ ಮೆರೆದ
ಮದದ ಅಟ್ಟಹಾಸ ಮರೆತು
ಅಳುವುದೇತಕೆ
ನುಂಗಿ ನೊಣೆದೆ, ವಿಷದ ಜ್ವಾಲೆ
ಬೆನ್ನು ಹಿಡಿಯೆ ದಿಗಿಲಿಗೀಗ
ಶರಣು ಎನುತಿಹೆ

ನಿಯಮ ಮೀರಲಿಲ್ಲ ತಾಯಿ
ನರನಿಲ್ಲದ  ಜಗವ ಮಾಡು
ಬೇಡುತಿರುವೆವು

(ಶಾಲಿ = ಭತ್ತ)

— ರತ್ನ

2 Responses

  1. ನಯನ ಬಜಕೂಡ್ಲು says:

    Nice one

  2. ಶಂಕರಿ ಶರ್ಮ says:

    ಮಾನವನ ಮದದ ಅಟ್ಟಹಾಸದಿಂದ ನವೆಯುತ್ತಿರುವ ನಿಸರ್ಗ ಜೀವಿಗಳ ಬಗ್ಗೆ ಕಳಕಳಿ ತುಂಬಿದ ಭಾವನಾತ್ಮಕ ಕವನ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: