ಕವಿತೆ

Share Button

 

1
ಹತ್ತು ನಿಮಿಷದಲೊಂದು ಕವಿತೆಯ ಹೆತ್ತು
ಮಾತೆಯಾಗುವ ಮಾತೆ ಬೇಡ
ನವಮಾಸ ತುಂಬಿ ಹಡೆಯಲಿ ಕೂಸು
ಹೊರದನಿಯ ದಾರಿಯಲಿ ಹೆಕ್ಕ ಸಿಕ್ಕಿದ ಚೂರು

ಒಳದನಿಯ ತಮ್ಮಟೆಯ ಬಡಿದು ಬಡಿದು
ಕಣ್ಣುಕಿವಿಗಳು ಎಲ್ಲ ಏಕ ಇಂದ್ರಿಯವಾಗಿ
ಹೊರದನಿಯ ಬಿಡಿಚೂರು ಒಳದನಿಯ ಶಿಶುವಾಗಿ
ಅಂಗಾಂಗ ತುಂಬಿ ಜೀವರಸವಾಡಿ

ಪ್ರಾಣವಾಯುವ ಹೀರಿ ಹೊರಲೋಕ ಸಾರಿ
ನೋವದಾರಿಯ ಬಗೆದು ನಗೆಯ ಬೀರಿ
ಹಡೆದ ತಾಯಿಯ ಮೊಗದಿ ಬೆವರ ಕೋಡಿ!


2
ಚಿಪ್ಪಿನೊಳಗೆ ಚುಪ್ಪೆಂದು ಕಣ್ಮುಚ್ಚಿ ಕೂತರೆ ಕವಿತೆ
ಒಳಗ ಕಾಣುವ ಕಣ್ಣು ತೆರೆದುಕೊಂಡರೆ ಕವಿತೆ
ಬೆರಗಸೆರಗನು ಹಿಡಿದು ಜೀಕಿದರೆ ಕವಿತೆ
ಹುಂಬಮನಸಿನ ಆಳಕನ್ನಡಿ ಕವಿತೆ

ಮೌನಸೀಮೆಯ ಒಡಲುಬಿರಿದರೆ ಕವಿತೆ?
ಚಿಂತೆ ಚಿಕ್ಕಮ್ಮನ ಹೃದಯಪುಷ್ಪವೆ ಕವಿತೆ
ಅಳಲ ತಾಯ ಹಿರಿಮಗಳೆ ಕವಿತೆ
ಏಳೇಳು ಕವಿತೆ ಹುಟ್ಟುನಂಟಿನ ಕವಿತೆ
ಸಾವು ಹೊಂಚುವ ಹದ್ದುಸದ್ದಡಗಿಸಿದ ಕವಿತೆ

-ಮಹೇಶ್ವರಿ.ಯು

8 Responses

  1. ಶಿವಮೂರ್ತಿ ಹೆಚ್ says:

    ಸೂಪರ್ ಮೇಡಂ

  2. Anonymous says:

    ತುಂಬಾ ಚೆನ್ನಾಗಿದೆ ಮೇಡಂ.ಇವತ್ತು ಎಲ್ಲಾ ಕವಿಗಳಿಗೂ ಅರ್ಜೆಂಟ್ ಭಾವಕ್ಕೆ ಜೀವ ತುಂಬುವ ವರೆಗೆ ಕಾಯಲು ಪುರುಸೊತ್ತಿಲ್ಲ.ಮೊಟ್ಟೆಯಿಡುವ ಮೊದಲೇ ಮರಿಯಾಗಬೇಕು.ಅದಕ್ಕೆ ಮುಕ್ಕಾಲು ಪಾಲು ಕವಿತೆಗಳೂ ಮನ ತಟ್ಟುವುದಿಲ್ಲ.

  3. ನಯನ ಬಜಕೂಡ್ಲು says:

    ಎಲ್ಲೆಲ್ಲಿ, ಹೇಗೆ ಹೇಗೆ ಕವಿತೆ ಹುಟ್ಟಿಕೊಳ್ಳುತ್ತದೆ ಅನ್ನುವುದನ್ನು ಇಲ್ಲಿ ಕಾಣಬಹುದು. Nice

  4. ಪರೋಕ್ಷವಾಗಿ ಉಲ್ಲೇಖಿಸಿದ ಕಿವಿಮಾತಿನೊಂದಿಗೆ ಕವನ ಚೆನ್ನಾಗಿದೆ.ಮಹೇಶ್ವರಿ ಮೇಡಮ್.

  5. ವಿದ್ಯಾ ಶ್ರೀ ಎಸ್ ಅಡೂರ್ says:

    ಅಳಲ ತಾಯ ಹಿರಿಮಗಳು ಕವಿತೆ……..ಸೂಪರ್ ಮೇಡಂ…

  6. ಪ್ರಕಾಶ್ ಅನಂಗೂರ್ says:

    ಆರಂಭದ ಸೊಬಗು ಅಂತ್ಯದಲ್ಲಿ ಹಿಮ್ಮೆಟ್ಟಿ ಹೋದಂತೆ
    ಒಟ್ಟಿನಲ್ಲಿ ಸೌಂದರ್ಯ ಇದೆ

  7. .ಮಹೇಶ್ವರಿ.ಯು says:

    ಎಲ್ಲರಿಗೂ ಧನ್ಯವಾದಗಳು.

  8. ಶಂಕರಿ ಶರ್ಮ says:

    ಕವಿತೆ ಬರೆಯುವ ಕಷ್ಟದ ಬಗ್ಗೆ ಸೊಗಸಾದ ಕವಿತೆ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: