ರಾಮಾಯಣ ಸಾರ

Share Button

ಕೋಸಲ ದೇಶದ ದಶರಥ ರಾಜನಿಗೆ|
ಹಿರಿಮಗನಾಗಿ ಜನಿಸಿದ ರಾಮ|
ಕೌಸಲ್ಯಾದೇವಿಯ ಹಿರಿಮೆಯ ಪುತ್ರನಿಗೆ|
ಕರಜೋಡಿಸಿ ಭಕ್ತಿಲಿ ನಮಿಸುತ್ತ ನಾಮ||೧||

ದಶಾವತಾರದ ರಾಮಾವತಾರವೆ|
ಧರಣಿಲಿ ಬಾಳಿದ ಪುರುಷೋತ್ತಮ|
ಲೋಕದ ಜನರ ಕಷ್ಟ ಕರಗಿಸುವ|
ಲಾಲಿತ್ಯವೆನಿಪ ಲೋಕಾಭಿರಾಮ||೨||

ಪಿತನಾ ಮಾತಿನ ಶಿರಸಾವಹಿಸಿ|
ತೀರ್ಪಿತ್ತ ಕೈಕೆಯ ಹಠವ ಪೂರೈಸಿ|
ಕೌಸಲ್ಯೆ ಸುಮಿತ್ರೆಯರ ಕಣ್ಣೀರೊರೆಸಿ•
ಹೊರಟನು ಹದಿನಾಲ್ಕು ವರ್ಷ ವನವಾಸಿ||೩||

ರಾಮನ ಸತಿ ರಮಣಿ ಸೀತಾಮಣಿ |
ಪತಿವ್ರತೆ ಸಾಲಲ್ಲಿ ಮಿಂಚುವ ಮಾನಿನಿ|
ಸೋದರ ವಾತ್ಸಲ್ಯಕೆ ಭರತನೆ ಪ್ರಥಮ|
ಅತ್ತಿಗೆಯು ಲಕ್ಷ್ಮಣನಿಗೆ ಅಮ್ಮನ ಸಮ||೪||

ಮಾಯಾಮೃಗಕೆ ಮನಸೋತ ಸೀತೆ|
ಮಮ್ಮಲ ಮರುಗಿದಳು ಲಂಕೆಯಲಿ ಮತ್ತೆ|
ರಾವಣನ ಹಿಡಿತಕ್ಕೆ ದಕ್ಕಲಿಲ್ಲ ಮಾತೆ|
ಅವನಿಲಿ ಅವತರಿಸಿದ ಪುನೀತೆ ಪ್ರಖ್ಯಾತೆ||೫||

ರಾಮ-ರಾವಣರ ಯುದ್ಧದ ತತ್ವ|
ಅಡಗಿಸಿದ ಅವತಾರಿ ಅಸುರೀ ಕೃತ್ಯ|
ಮನುಜಗೆ ರಾಮ-ಲಕ್ಷ್ಮಣರ ಉಪದೇಶ|
ಮಾನಿನಿಯರಿಗೆಲ್ಲ ಸೀತೆಯೆ ಆದರ್ಶ||೬||

ರಾಮಾಯಣ ಮಹಾಭಾರತ ಪುರಾಣಜ್ಞಾನ|
ಯುಗಯುಗ ಕಳೆದರು ನವೀನ ಕಥನ|
ಬಯಸಿಲ್ಲ ವ್ಯಾಸ,ವಾಲ್ಮೀಕಿ ಪ್ರಶಸ್ತಿ ಸನ್ಮಾನ|
ಬಯಕೆ ನಿರೀಕ್ಷೆಯೇ ಲೋಕ ಕಲ್ಯಾಣ||೭||

-ವಿಜಯಾಸುಬ್ರಹ್ಮಣ್ಯ, ಕುಂಬಳೆ 

4 Responses

  1. ಧನ್ಯವಾದಗಳು ಪ್ರಕಟಿಸಿದ ಹೇಮಮಾಲಾ ಅವರಿಗೂ ಹಾಗೇ ಸುರಹೊನ್ನೆಯಲ್ಲಿ ವ್ಯವಹರಿಸುವ ಎಲ್ಲಾ ಬಂಧು-ಮಿತ್ರರಿಗೂ ರಾಮನವಮಿಯ ಶುಭಾಶಯಗಳು.
    ದೇಶಕ್ಕೊದಗಿದ ಕೊರೋನಾ ಕಂಟಕ ಶೀಘ್ರದಲ್ಲೇ ಇಲ್ಲಿಂದ ಸಂಪೂರ್ಣವಾಗಿ ತೊಲಗಲಿ ಅದಕ್ಕಾಗಿ ಶ್ರೀ ರಾಮನ ಅನುಗ್ರಹ ಬೇಡುವ ವಿಜಯಾಸುಬ್ರಹ್ಮಣ್ಯ

  2. Anonymous says:

    ಓದಿದಾಗ .ಒಮ್ಮೆ ರಾಮನನ್ನು ನೆನೆಯುವ ,ಒಳ್ಳೆಯ ಸಂದೇಶ ￿Akka
    ಈಗಿನಜನರೇಷನವರಿಗೆ ಪೌರಾಣಿಕ ಕಥೆಯಾವುದು ಬೇಡ ನೋಡು ಒಮ್ಮೆ ಎಂದಾಗ .ರಾಮಕಷ್ಟ ಬಂದಾಗೆ ನಮಗೆ ಬೇಢಎನ್ನುವರು .

  3. ನಯನ ಬಜಕೂಡ್ಲು says:

    ಒಂದು ಕವನದೊಳಗೆ ಇಡೀ ರಾಮಾಯಣ ವನ್ನು ವಿವರಿಸಿದ ಪರಿ ಅದ್ಭುತ.

  4. Shankari Sharma says:

    ಸೂಕ್ಷ್ಮ ರೂಪದಲ್ಲಿ ಅತಿ ಹಿರಿದಾದ ರಾಮಾಯಣವನ್ನು ಉಣ ಬಡಿಸಿದ ಪರಿ ಅನನ್ಯ. ಧನ್ಯವಾದಗಳು ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: