ವಿರಾಮ

Share Button

 

ತನ್ನ ವೈಚಾರಿಕ ಆಲೋಚನೆ
ತನಗೇ ಭಾರವಾಯಿತೆ ?
ಏಕೋ ಅನಿಸಿತು ಅವನಿಗೆ
ಆಗ ನೆನಪಾಯಿತು
ಆ ಹಿರಿಯರ ಮಾತು
ಕಾಲು ಸರ ಸರ ತುಳಿಯಿತು
ದೇವಸ್ಥಾನದ ಮೆಟ್ಟಿಲು
ಒಳಹೋದ
ಚಿಂತನೆ ಲಗೇಜು
ಬಾಗಿಲಲೇ ಇಳಿಸಿಬಿಟ್ಟು.

ಕಿವಿಯ ತಣಿಸಿತು ಘಂಟಾನಾದ
ಶಿಲ್ಪಕಲೆ,ಕುಸುರಿ ,ಅಲಂಕಾರ
ಕಣ್ಣಿಗೆ ಸೊಬಗು ಮನೋಹರ
ಪಚ್ಚಕರ್ಪೂರ,ಪರಿಮಳ,ಅಗರು
ಆಘ್ರಾಣಿಸಿ ಸಂಭ್ರಮಿಸಿತು ಮೂಗು
ಪ್ರಸಾದ ಸಿಕ್ಕಿತು  ಸಿಹಿ ಪೊಂಗಲು
ನಾಲಗೆಗೆ ಆಹಾ ರುಚಿಯ ಹೊನಲು!
ಮೂರ್ತಿಯ ಪಾದಸ್ಪರ್ಶವೂ ಲಭ್ಯ
ಅದು ಈ ದಿನದ ವಿಶೇಷ ಸೌಲಭ್ಯ

ಉತ್ಸಾಹ,ಉಲ್ಲಾಸದಿ  ಹೊರಬಂದ
ವಿಚಾರಗಳ ಮತ್ತೆ ಹೆಗಲಿಗೇರಿಸಿದ

ಈಗವನು ಬಹಳ ನಿರುಮ್ಮಳ
ಚಿಂತನೆಗಳೀಗ ಮತ್ತಷ್ಟು   ಆಳ

– ಮಹಾಬಲ

7 Responses

  1. Anonymous says:

    ಸುಂದರ ವಿಡಂಬನೆ.

  2. ಶ್ರೀನಿವಾಸ್ ಬಿ.ಎಸ್ says:

    ವಿಚಾರವಾದಿಗಳ ದ್ವಂದ್ವ ಮನಸ್ಥಿತಿಯ ಚಿತ್ರಣ ತುಂಬಾ ಚೆನ್ನಾಗಿ ಮೂಡಿಬಂದಿದೆ

  3. T S SHRAVANA KUMARI says:

    ಸೊಗಸಾದ ವಿಡಂಬನೆ

  4. Hema says:

    ಎಡೆಬಿಡಂಗಿ ಮನಸ್ಥಿತಿಯು ಅನಾವರಣಗೊಂಡಿದೆ. ಚೆಂದದ ಕವನ.

  5. Sriprakash says:

    ಸುಂದರ ವಿಡಂಬನೆ!

  6. ನಯನ ಬಜಕೂಡ್ಲು says:

    ಮನಸೇ ರಿಲ್ಯಾಕ್ಸ್ ಪ್ಲೀಸ್… ಅಲ್ವಾ ಸರ್

  7. Shankari Sharma says:

    ಭಾರವಾದ ಯೋಚನೆಗಳನ್ನು ದೇವರ ಮೇಲೆ ಹೇರಿ ನಿರಾಳವಾದ ಮನ..‌ ಸುಂದರ ಕವನ.

Leave a Reply to ಶ್ರೀನಿವಾಸ್ ಬಿ.ಎಸ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: