ನಮ್ಮ ನಾಡು

Share Button

.

ನಮ್ಮ ನಾಡ ಕಟ್ಟಬೇಕು
ಬನ್ನಿ ನಮ್ಮ ಸಂಗಡ
ನಮ್ಮ ಭಾಷೆ ಬೆಳೆಯಬೇಕು
ಹೇಳಬೇಕು ಕನ್ನಡ
.
ವೃಕ್ಷಗಳನು ಬೆಳೆಸಬೇಕು
ಹಚ್ಚಿರೆಲ್ಲಾ ಸಸಿಗಳಾ
ಉಸಿರುಸಿರಿಗೆ ಹಸಿರು ಬೇಕು
ಬೀಸಲೊಮ್ಮೆ ಮರಗಳ
.
ಹೊಟ್ಟೆ ತುಂಬ ಅನ್ನ ಬೇಕು
ಇರುವುದೊಂದೆ ಆಸರ
ಭೂಮಿ ತುಂಬ ಹರಗಬೇಕು
ಮಳೆ ಬರದೆ ಬೇಸರ
,
ಕಾಡ ಮೃಗಗಳ ನಾಡ ಖಗಗಳ
ಇರಲಿ ನಮ್ಮ ಪರಿಸರ
ಭೂಮಿ ಬೆಳೆಯಲಿ ಮಡಿಲ ತೆನೆಗಳ
ಮಳೆಯು ಬರಲಿ ಸರಸರ
.
ನಮ್ಮ ನಾಡ ಕಟ್ಟಬೇಕು
ಬನ್ನಿ ನಮ್ಮ ಸಂಗಡ
ಎಲ್ಲೆಡೆಗು ಹರಡಬೇಕು
ಕನ್ನಡ ಕನ್ನಡ
.

ಮಧುಮತಿ ರಮೇಶ್ ಪಾಟೀಲ್

6 Responses

  1. ತುಂಬ ಅರ್ಥಪೂರ್ಣ ಕವನ ಮೇಡಂ

  2. ಶಾರದಾ ವಟಗಲ್ says:

    ಚೆನ್ನಾಗಿದೆ ಮೇಡಂ ಕವನ
    ಕನ್ನಡ ಬೆಳಸೋಣ

  3. ನಯನ ಬಜಕೂಡ್ಲು says:

    ಕನ್ನಡದ ಸವಿಯೇ ಬೇರೆ . ಚೆನ್ನಾಗಿದೆ

  4. Hema says:

    ಸಕಾಲಿಕವಾದ ಚೆಂದದ ಕವನ..

  5. ದೇವಿ says:

    ಸುಂದರ ಕವನ ಮೇಡಂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  6. Shankari Sharma says:

    ಕನ್ನಡ ರಾಜ್ಯೋತ್ಸವಕ್ಕಾಗಿ ಸುಂದರ ಕವನ…ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: