ಗಜ಼ಲ್-2

Share Button

ಈ ರಾತ್ರಿ ನಾವೆಲ್ಲ ಉಂಡು ಬೆಚ್ಚಗೆ ಮಲಗಲೂ ಬಹುದು
ಯಾರಿಗೆ ಗೊತ್ತು ಬರೀ ಚಡಪಡಿಕೆಯಲ್ಲದು ಕಳೆದುಹೋಗಬಹುದು

ಅಲ್ಲೆಲ್ಲೋ ಗಡಿಯ ಹಿಮದಲ್ಲಿ ಕಾವಲು ನಿಂತ ಯೋಧ
ಈ ರಾತ್ರಿ ಅವನ ಮೇಲೆ ಬೆಂಕಿಯ ಮಳೆ ಸುರಿಯಬಹುದು

ದೇಶಕ್ಕಾಗಿ ಏನೆಲ್ಲ ದೌರ್ಜನ್ಯಗಳ ಸಹಿಸಿದ್ದಾರೆ ‘ವೀರ’ರು
‘ಸಿದ್ಧ’ ಸೂತ್ರಗಳಲ್ಲಿ ಅವರ ಬಗ್ಗೆ ವಿಷವನ್ನೇ ಕಾರಬಹುದು

ಬೆಚ್ಚಗೆ ಕೂತು ಕಣ್ಮುಚ್ಚಿ ತೀರ್ಪು ನೀಡುವುದು ಎಷ್ಟು ಸುಲಭ!
ಯಾರನ್ನು ಕುರಿತೂ ಬಾಯಿಗೆ ಬಂದದ್ದನ್ನು ಬೊಗಳಬಹುದು

ಕಾಲನ ಪರೀಕ್ಷೆಯಲ್ಲಿ ಹಾಲು ಹಾಲೇ ಕೊಚ್ಚೆ ಕೊಚ್ಚೆಯೇ ಗೆಳೆಯ
ಎಚ್ಚರ!ಆಡಿದ್ದೆಲ್ಲ ತಿರುಗು ಬಾಣವಾಗಿ ಎದೆಗೆ ಬಡಿಯಬಹುದು

• ಡಾ. ಗೋವಿಂದ ಹೆಗಡೆ

4 Responses

  1. km vasundhara says:

    ಚೆನ್ನಾಗಿದೆ…

  2. Anonymous says:

    ಅಹಾ !ಸೊಗಾಸಾದಬರಹ .

  3. ನಯನ ಬಜಕೂಡ್ಲು says:

    ಬ್ಯೂಟಿಫುಲ್. ಬಹಳ ಅರ್ಥಪೂರ್ಣ ಸಾಲುಗಳು , ನಮ್ಮ ರಕ್ಷಕರನ್ನು ನೆನೆದ ರೀತಿ ಬಹಳ ಇಷ್ಟವಾಯಿತು .

  4. Shankari Sharma says:

    ವೀರ ಯೋಧರ ಕೆಚ್ಚೆದೆಯ ಶೌರ್ಯ ಸಾಹಸಗಳು ಯಾವಾಗಲೂ ಸ್ಫೂರ್ತಿದಾಯಕ..ಚೆಂದದ ಗಝಲ್.

Leave a Reply to km vasundhara Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: