ಕಾವ್ಯ ಮೋಹಿಗೆ

Share Button

ನಿದ್ದೆಯಿಂದೇಳು ಗದ್ದುಗೆಯನಾಳು
ಗುದ್ದು ಆಲಸಿಗಳ ಬೆನ್ನ ಮೇಲೊಂದು
ಎದ್ದು ಮದ್ದಾನೆಗಳ ಹಿಂಡ ಮುನ್ನೆಡಸು

ಎತ್ತ ಹೋಗಿವೆ ಇಂದು
ಚಿತ್ತ ಬಿಟ್ಟಿಲ್ಲಿ
ಬಟ್ಟಬಯಲಿನ ತುಂಬಾ
ಚಿಟ್ಟೆ ಹಿಡಿಯುತಲಿಹರೇ

ಅಟ್ಟ ಹತ್ತಿರಿ‌ ಎಂದು
ಅಲವತ್ತುಕೊಂಡರೂ
ಉಟ್ಟ ಪತ್ತಲದಲ್ಲೆ

ಬೆಟ್ಟ‌ ಏರುವ ತವಕ
ಮನವ ಬಾಧಿಸುತಿಹುದೇ
ಬುಟ್ಟಿ ಹಣ್ಣುಗಳೇನು
ತಟ್ಟನೇ ದಕ್ಕುವವೇ?

ನೆಟ್ಟ ನೋಟವು ಕದಲದಂತಿರೇ ಸಾಕೆ?
ಮರವನೇರಲು‌ ಇರದ ಕಸುವು
ಬೆರಗು ಹೂಗಳ ಶಂಕೆ ಸುಳಿವು
ಜಡಜಂಜಡದಿ ಕುಸಿದ ಮನವು

ಎದ್ದು ಜಾಡಿಸಿ ಬಂದು
ತಗಣಿತಂಡವ ಕೊಂದು
ಹರನ ಹಾಲ್ಗಡಲನ್ನೆ
ಉಂಡು ಬನ್ನಿ
ಚಂದದೌತಣವನ್ನೆ ಕಾವ್ಯ ಸುಧೆಗೆ ತನ್ನಿ

-ನಾಗರೇಖಾ ಗಾಂವ್ಕರ್

4 Responses

  1. Hema says:

    ಚೆಂದದ ಕವನ

  2. Shankari Sharma says:

    ಸೊಗಸಾದ ಕವಿತೆ.

  3. ನಯನ ಬಜಕೂಡ್ಲು says:

    ಸುಂದರವಾಗಿದೆ ಕವನ . ಯಾವುದೇ ಕೆಲಸದಲ್ಲೂ ಪರಿಶ್ರಮವೇ ಮುಖ್ಯ ಅನ್ನುವ ಸಾರವನ್ನು ಇಡೀ ಕವನ ವಿವರಿಸುತ್ತದೆ .”ಬೆಟ್ಟ ಹತ್ತುವ ತವಕ ” – ಈ ಸಾಲುಗಳು ಬಹಳ ಇಷ್ಟವಾಯಿತು .

  4. ಶಿವಮೂರ್ತಿ.ಹೆಚ್. says:

    ವಿನೂತನ ದೃಷ್ಟಿಕೋನದ ಕವಿತೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: