ಏಕೆ ಮುನಿಸು ಮೋಡಗಳೇ 

Share Button

ಏಕೆ ಈ ಮುನಿಸು
ಓಡುವ ಮೋಡಗಳೇ
ನಾಲ್ಕು ಹನಿಯ ಚೆಲ್ಲುವ
ಮನಸು ನಿಮಗಿಲ್ಲವೇಕೆ

ಬಾಯಾರಿದ ಒಡಲು ಬೇಡಿದೆ
ಬರಿದಾದ ಎದೆಯ ತಣಿಸಬಾರದೆ
ಬಿರಿದ ಭೀಕರ ಬರದ ಬೇಗೆಯ
ತಡೆಯಲು ನೀ ಬರಬಾರದೆ

ಆಷಾಡವೂ ಕಳೆದುಹೋಯ್ತು
ಆದರೂ ಒಂದು ಹನಿಯ ಸುಳಿವಿಲ್ಲ
ಮೇವಿಲ್ಲದೆ ನೀರಿಲ್ಲದೆ ಬಳಲಿದ
ಜೀವಗಳಿಗಿನ್ನು ಉಳಿಗಾಲವಿಲ್ಲ

ಭಣಗುಡುತಿದೆ ಒಣನೆಲ
ಬೆಂಬಿಡದೆ ಕಾಡುತಿದೆ ಬರ
ಮರುಭೂಮಿಯಂತಾಗಿರಲು
ಮರುಜೀವ ಮರುಪೂರಣವಾಗುವುದೇ

ನಮ್ಮ ತಪ್ಪನು ಮನ್ನಿಸಿ
ನಾಲ್ಕು ಹನಿಯ ಸುರಿಸಿ
ಭರವಸೆಯ ತುಂಬಿ ಮೋಡಗಳೆ
ಕಾದ ಕೆಂಡದಂತಾಗಿದೆ ಈ ಇಳೆ

ಅಮು ಭಾವಜೀವಿ

 

4 Responses

  1. Anonymous says:

    ತುಂಬ ಚೆನ್ನಾಗಿದೆ ಕವಿತೆ ಸರ್

  2. Vasundhara Kadaluru Mallappa says:

    ಭಾವ ಜೀವಿಯವರ ಸದಾಶಯದಂತೆ ಸರಿಯಾದ ಕಾಲಕ್ಕೆ ತಕ್ಕಷ್ಟು ಮಳೆಯಾಗಲಿ

  3. ನಯನ ಬಜಕೂಡ್ಲು says:

    ಚಂದದ ಕವನ. ಪ್ರಸ್ತುತ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ ಹಾಗಿದೆ. ಮಳೆಗಾಲ ಆದರೂ ಸರಿಯಾಗಿ ಮಳೆ ಆಗ್ತಿಲ್ಲ , ಕೃಷಿಕರಲ್ಲಿ ಬರಗಾಲದ ಭೀತಿ ಈಗಾಗಲೇ ಆವರಿಸತೊಡಗಿದೆ

  4. Shankari Sharma says:

    ಸದಾಶಯದ ಸುಂದರ ಕವನ.

Leave a Reply to Vasundhara Kadaluru Mallappa Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: