ಕವಿತೆ

Share Button

 

ಬರೆಯುವ ಮೊದಲು
ಕವಿತೆ
ಮನಸುಖರಾಯ ಮಗು
ಮಿಸುಕುತ್ತ ಒದೆಯುತ್ತ
ಒಡಲ ಜಗ್ಗಿಸಿ ಹಿತನೋವು
ತರುತ್ತ ಹೊತ್ತವಳಿಗೆ

ಅಷ್ಟಷ್ಟೇ ಕಣಗಳು ಕೂಡಿ
ಕೂಡುತ್ತ ತುಂಬುತ್ತ ಭಾರ
ವಾಗುತ್ತ ಮೋಡ
ಮಿಂಚು ಕಣ- ಕ್ಷಣಗಳಿಗೆ
ಕಾದು ತಪಿಸುತ್ತ ಕಾತರಿಸುತ್ತ
ತೆಕ್ಕಾಮುಕ್ಕಿಗೆ
ಮಿಲನ ಫಲಿಸಿ ಮಳೆಯಾಗಿ
ಸುರಿವ ಹದಕ್ಕೆ

ಬರೆದ ಎದೆ ಸುರಿದ ನಂತರದ
ಮನಸು- ಖಾಲಿ ಮುಗಿಲು
ಹಾಗೂ ಸಂತೃಪ್ತ
ಹಗೇವು ಮತ್ತೆ ತೆರೆದು
ಒಡಲು ಕೂಡಲು
ಸಿದ್ಧ-ಸನ್ನದ್ಧ

• ಡಾ.ಗೋವಿಂದ ಹೆಗಡೆ

7 Responses

  1. Smitha Amrithraj says:

    ಕವಿತೆಯಾಗುವುದೆಂದರೆ ಸುಲಭವಾ ಮತ್ತ?, ಚೆನ್ನಾಗಿ ಕಟ್ಟಿ ಕೊಟ್ಟಿರುವಿರಿ.

  2. km vasundhara says:

    ಬಹಳ ಚೆನ್ನಾಗಿದೆ ಕವಿತೆ…

  3. Anonymous says:

    ಸೊಗಸಾಗಿದೆ.

  4. ನಯನ ಬಜಕೂಡ್ಲು says:

    “ಮನದ ಕಡಲಲ್ಲಿ ಬತ್ತದ ಒರತೆ, ಮೊಗೆದಷ್ಟು ತುಂಬೋ ಸಾಲುಗಳು ಮತ್ತೆ ಮತ್ತೆ ,
    ಮನಸುಗಳ ಸಿಂಗರಿಸೋ ಈ ಬಣ್ಣದ ಸಂತೆ ,
    ಗೆ ನೀವಿಟ್ಟ ಹೆಸರೇ ಕವಿತೆ “.

    ಚೆನ್ನಾಗಿದೆ ಸರ್

  5. Anonymous says:

    ಚೆಂದದ ಕವನ

  6. Shankari Sharma says:

    ಕವಿತೆ ಬರೆಯುವ ಕಷ್ಟ…ಚೆನ್ನಾಗಿದೆ ಕವನ.

  7. Anonymous says:

    Super

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: