ಬುದ್ಧನಾಗದೇ ನಿನ್ನ  ಗ್ರಹಿಸಲಾರೆ

Share Button

ನಾನು ಕೇವಲ ಮನುಷ್ಯ.
ಮಾನುಷ ಅನುಭವಗಳ ಬಗ್ಗೆ
ಹೇಳಬಲ್ಲೆ
ಅವ ಎತ್ತರ ಇವ ಕುಳ್ಳು ಇವ ಜಾಣ ಅವ ದಡ್ಡ
ಅವನೋ ಕ್ರೂರಿ ಇವ ದಯಾಮಯಿ- ಹೀಗೆ
ದೈವಿಕ ಅನುಭವಗಳ ಒರೆಗೆ ಹಚ್ಚಲಿ ಹೇಗೆ

**
‘ನಾವು ಮನುಷ್ಯರಾಗಿ ಬಂದಿಲ್ಲ
ಮನುಷ್ಯರಾಗಲು ಬಂದಿದ್ದೇವೆ’
ಅನ್ನುತ್ತಾರೆ
‘ನಾವು ಮನುಷ್ಯರಾಗಿ ದೈವಿಕತೆಯನ್ನು
ಹುಡುಕುತ್ತಿಲ್ಲ,
ದಿವಿಜರೇ ಆಗಿದ್ದು ಮಾನುಷ ಅನುಭವವನ್ನು
ಹಾಯುತ್ತಿದ್ದೇವೆ’
ಎಂಬ ಮತವೂ ಇದೆ
ನನಗೆ ಎರಡೂ ಅರಿವಿಗೆ ದಕ್ಕದೆ…

    **
ನೀನು ದೈವತ್ವದ ಕುರಿತು ಉಸಿರೆತ್ತಲಿಲ್ಲ
ಕೇವಲ
ಮನುಜನ ಬಿಡುಗಡೆಯ ಮಾತಾಡಿದೆ
ಸದ್ವಿಚಾರ, ಸನ್ನಡತೆ, ಸತ್ಕರ್ಮಗಳ
ಮೂಲಕ
ಯಾತನೆಯಿಂದ ಬಿಡುಗಡೆಯ
ಮಾತನಾಡಿದೆ
ನಿನ್ನ ಮಾತನ್ನು ಅರಿಯಬಲ್ಲೆ
ಮೌನವನ್ನು ಹೇಗೆ ಗ್ರಹಿಸುವೆ
ನಿನ್ನನರಿಯಲು ನಾನು-ನೀನೇ
ಆಗಬೇಕೇ ?

– ಗೋವಿಂದ ಹೆಗಡೆ

4 Responses

  1. Kavya says:

    Super

  2. Shankari Sharma says:

    ಕವನ ಚೆನ್ನಾಗಿದೆ

  3. ವಸುಂಧರಾ says:

    ಚೆನ್ನಾಗಿದೆ..

  4. Nayana Bajakudlu says:

    ಬುದ್ಧ ಮಹಾನ್ ವ್ಯಕ್ತಿ , ಅವನ ಚಿಂತನೆಗಳು ಸರಳ ಮತ್ತು ಶ್ರೇಷ್ಠ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: