ಮತ್ತೆ ಬಂದಿತು ಯುಗಾದಿ

Share Button

.

ಮತ್ತೆ ಬಂದಿತು ಯುಗಾದಿ
ಹೊಸ ಸಂವತ್ಸರದ ಪ್ರಾರಂಭಕಿದು ನಾಂದಿ,
ಚೈತ್ರಮಾಸದ ಈ ಪ್ರಥಮ ಶುಭದಿನದಿ,
ಆಚರಿಸುವರು ಹಬ್ಬವನು
ಉಲ್ಲಾಸದಿ ಉತ್ಸಾಹದಿ..
.
ಹಸಿರು ಹೂವಿನ ಎಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ
ಕಟ್ಟುವರು ತಳಿರು ತೋರಣಾ.
ಎಲ್ಲರ ಮನೆಮುಂದೆ ಕಂಗೊಳಿಸುವದಂದು ಬಣ್ಣ ಬಣ್ಣದ ರಂಗೋಲಿಯ ಚಿತ್ರಣಾ..
.
ಬೆಳಿಗ್ಗೆ ಬೇಗನೆದ್ದು ಮಾಡುವರಂದು ಅಭ್ಯಂಜನ ಸ್ನಾನ,
ನಂತರ ಹೊಸ ವಸ್ತ್ರಧಾರಣ.
ಮಹಿಳೆಯರು ದೇವಿಗುಡಿಗೆ ತೆರಳಿ ಪಾದಗಟ್ಟೆಗೆ ನೀರೆರೆದು ಪಡೆಯುವರು ದರುಶನ,
ಕೋರುವರು ಮನೆಮಂದಿಯ ಒಳಿತನ್ನ…
.
ದೇವರ ಪೂಜೆಗೈದು ಅಂದು ಹಿರಿಯರು ಮಾಡುವರು ಪಂಚಾಂಗ ಪಠಣಾ,
ನಂತರ ಮನೆಮಂದಿಯಿಂದ ಅದರ ಶ್ರವಣಾ,
ಕಷ್ಟಸುಖಗಳೆರಡೂ ಜೀವನದ ಸಿಹಿಕಹಿ ಎಂದು ಅರಿತು ಸೇವಿಸುವರಂದು ಬೇವುಬೆಲ್ಲದ ಮಿಶ್ರಣಾ,
ಸವಿಯುವರು ನಂತರ ಹೋಳಿಗೆ ಪಾಯಸದ ಸಿಹಿ ಭೋಜನ..
.
ಯುಗಾದಿ- ದೇಶೀ ವರ್ಷಾಚರಣೆಯ ಹಬ್ಬವೆಂದು ನಮಗೆ ಅಭಿಮಾನ,
ಅಂದು ಎಲೆಗಳು ಚಿಗುರೊಡೆಯುವ ದಿನ.
ವಸಂತಕಾಲ ಆಗಮನದ ದಿನ,
ಸಂತಸ ಸಂಭ್ರಮ ಸಡಗರದ ದಿನ,
ಬೇಂದ್ರೆಯವರ ಯುಗಾದಿ ಕವಿತೆಯನ್ನು ನೆನೆಪಿಸಿಕೊಳ್ಳುವ ದಿನ,
ಈ ದಿನ- ಮೂಡಿಸುವದು ಎಲ್ಲರಲಿ ಅದಮ್ಯ ಚೇತನ…
.
ಅಂದು ಮಕ್ಕಳೊಂದಿಗೆ ತೆರಳಿ ಗುರುಹಿರಿಯರನು ಭೇಟಿಯಾಗೋಣಾ,
ಪಡೆಯೋಣಾ ಆಶೀರ್ವಾದ ಮುಟ್ಟಿ ಅವರ ಚರಣಾ.
.
ಹೊಸ ವರ್ಷದ ನಿರ್ಣಯ ಕೈಗೊಳ್ಳೋಣಾ,
ಅದರ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸೋಣಾ..
.
 – ಮಾಲತೇಶ ಎಂ ಹುಬ್ಬಳ್ಳಿ

2 Responses

  1. Nayana Bajakudlu says:

    ಬ್ಯೂಟಿಫುಲ್. ಮನೆಯ ಆಪ್ತ ವಾತಾವರಣ ಇಲ್ಲಿ ಅನಾವರಣ ಗೊಂಡಿದೆ. ಹಬ್ಬದ ಸಂಭ್ರಮ , ಸಡಗರ, ಆಚರಣೆ ಎಲ್ಲವೂ ಸುಂದರವಾಗಿ ವರ್ಣಿಸಿದ್ದೀರಿ ಸರ್

  2. Shankari Sharma says:

    ಹಬ್ಬದ ಹೋಳಿಗೆ ಸವಿದ ಅನುಭವದ ಸುಂದರ ಕವನ

Leave a Reply to Nayana Bajakudlu Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: