ಮೌನದ ಮಾತು

Share Button

ಗೆಳತಿ ಹೇಳಿದಳು
ಕವಿತೆ ಬರೆ ಎಂದು,
ಬರೆಯ ಹೊರಟೆ…
ಮಸ್ತಿಷ್ಕದಾಳದಲಿ ಭಾವನೆಗಳೇನೋ
ತುಂಬಿ ತುಳುಕುತಿದೆ
ಸಿಹಿಯೋ.. ಕಹಿಯೋ..
ತೊಳಲಾಟ, ಚಡಪಡಿಕೆ..
ಅತಿಯಾದ ಸ್ಪಂದನಕೂ
ಇರಬಹುದೇನೋ..

ಒಳಮುಷ್ಟಿಯಂತಿರುವ
ಕವಾಟದೊಳಗೆ ಬಚ್ಚಿಟ್ಟ
ಯಂತ್ರಕೆ ಕೀಲ್ಬೆಣ್ಣೆ
ಹೆಚ್ಚಾಯಿತೇನೋ..
ಒಂದೇ ಸಮನೆ ಸಡಿಲವಾಗಿ
ಶಿವನ ಢಮರುಗವಾಗಿದೆ
ಕವಿತೆ ಕೇಳುವರಾರು..?

ಗೆಳತಿ ಹೇಳಿದಳು,
ವಿಶ್ರಾಂತಿ ಮಾಡು…
ಪಲ್ಲಂಗ, ಹಾಸಿಗೆ, ಚಾಪೆ, ಚಾದರಗಳೇನೋ
ಕೋಣೆಯಲಿ ತುಂಬಿದೆ…
ಒರಗಿದರೆ,
ಇಡೀ ಭೂಮಿಯೇ
ತನ್ನ ಮಡಿಲಲಿ ಕೂರಿಸಿ
ಗಿರಕಿ ಹೊಡೆಸುತಿದೆಯೋ.. ತಿರುಗುವ ರಭಸಕೆ,
ಕಿರುಚಾಡಿದೆ ಮನ..
ಲಾಲಿ ಹಾಡುವರಾರು..?

ಗೆಳತಿ ಹೇಳಿದಳು,
ತಣ್ಣಗಿರು..
ಆಗಲು ಹೊರಟೆ.. ತಂಗಾಳಿಯೇನೋ ಸುತ್ತ ಬೀಸುತಿದೆ..
ಇನ್ನಷ್ಟು ತಂಪಾಗಲು ಹೋಗಿ,
ಹಿಮದಲಿ ಹುದುಗಿದ ಹೂವಾದೆ
ತೆಗೆದು ಮುಡಿಗಿಡುವರಾರು..?

ಕಾಣದ ಕೋಮಲ ಮನ,
ನಿರ್ಲೇಪವಾಗಿ ಮೌನದಲೇ
ಉಲಿದರೆ ಮಿಡಿಯಲು,
ಅಗೋಚರ ಬಲವೊಂದಿದೆಯೇನೋ..
ಸಲಹಲು..??

ಕಲಾ ಚಿದಾನಂದ, ಮುಂಬೈ

11 Responses

  1. Anonymous says:

    Nice song with lot of emotions. Good luck to you and expect more such Kavana in future.

  2. Smitha Amrithraj says:

    ಒಳ್ಳೆಯ ಪ್ರಯತ್ನ ಕಲ..ಅಭಿನಂದನೆ

  3. Hema says:

    ಉತ್ಕಟ ಭಾವನೆಗಳ ಚೆಂದದ ಕವನ.

  4. Shobha R says:

    Tumba chennagide Kala.

  5. Gopal trasi says:

    ಅಭಿನಂದನೆ.. ಸುಸ್ವಾಗತ ಕಾವ್ಯ ಲೋಕಕೆ, ಹೀಗೊಂದು ಕವಿತೆ ಜೊತೆ, ಕವಿಗೂ ಸಹ……

  6. Anonymous says:

    ಕವನವನ್ನು ಪ್ರಕಟಿಸಿದ ಸುರಹೊನ್ನೆ ತಂಡದವರಿಗೂ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

  7. ಕಲಾ ಚಿದಾನಂದ says:

    ಕವನವನ್ನು ಪ್ರಕಟಿಸಿದ ಸುರಹೊನ್ನೆ ತಂಡದವರಿಗೂ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

  8. Lathika Bhat says:

    ಸುಂದರ ಕವನ.

  9. Vimala says:

    ಕವನ ಬಹಳ ಪ್ರೌಢವಾಗಿದೆ. ಅಭಿನಂದನೆಗಳು ಕಲಾ

  10. Shankari Sharma says:

    ಚೆನ್ನಾಗಿರುವ ಭಾವನಾತ್ಮಕ ಕವನ .

  11. ಕಲಾ ಚಿದಾನಂದ says:

    ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: