ದುಬೈಯಲ್ಲಿ ಕನ್ನಡ ಕಲರವ….

Share Button

ಮೊನ್ನೆ ನವೆಂಬರ್ 24 ಶುಕ್ರವಾರದಂದು ಜೆಎಸ್ಎಸ್ಅಂತರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಕನ್ನಡಿಗರು ದುಬೈ ಬಳಗದ ವತಿಯಿಂದ 62ನೆ ಕನ್ನಡ ರಾಜ್ಯೋತ್ಸವವನ್ನು ದುಬೈಯಲ್ಲಿಅದ್ದೂರಿಯಾಗಿ ಆಚರಿಸಲಾಯಿತು. ಪ್ರೇಕ್ಷಕರಿಂದ ತುಂಬಿ ತುಳುಕುತಿದ್ದ ಸಭಾಂಗಣದಲ್ಲಿ ಕನ್ನಡದ ಕಲರವ ಕೇಳಲು ಕಿವಿಗೆ ಇಂಪಾಗಿತ್ತು.

ಸುಂದರವಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ನೆರೆದ ಯು ಎ ಇ ದೇಶದ “ಕನ್ಡಡ ಕಣ್ಮಣಿ ” ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಬಿ ಅರ್ ಶೆಟ್ಟಿ, ಕನ್ನಡಿಗರು ದುಬೈ ಸದಸ್ಯರು ಹಾಗು ತಾಯಿನಾಡಿನಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ ವಿಶೇಷ ಅತಿಥಿಗಳು ದೀಪ ಬೆಳಗುವ ಕಾರ್ಯಕ್ರಮದಿಂದ ಶುಭಾರಂಭಗೊಂಡಿತು.

ನಂತರ ಮಾಧವಿ ಪ್ರಸಾದ ಅವರ ತಂಡದ ಮಕ್ಕಳು ನಮ್ಮ ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ನಮ್ಮ ಸುಂದರ ನಾಡ ಗೀತೆ ಜಯ ಭಾರತ ಜನನಿಯ ತನುಜಾತೆಯನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು. ಗೌರವ ಸೂಚಕವಾಗಿ ಹಾಗು ಅಭಿಮಾನಪೂರ್ವಕ ವಾಗಿ ಮಕ್ಕಳ ದನಿಯೊಂದಿಗೆ ಪ್ರೇಕ್ಷಕರೂ ದನಿಗೂಡಿಸಿದರು.

ಈ ಕಾರ್ಯಕ್ರಮಕ್ಕೆ ನಮ್ಮ ತಾಯಿನಾಡಿನಿಂದ ಗೌರವವಾನ್ವಿತ ಅತಿಥಿಗಳಾಗಿ ಶ್ರೀ ಎಸ್ ಎಸ್ ಗಣೇಶ್ ಹಾಗು ರೇಖಾ ದಂಪತಿಗಳು. ತಮ್ಮ ನಟನಾ ಚಾತುರ್ಯದಿಂದ ಬಾಲ್ಯದಿಂದಲೆ ಪ್ರಸಿದ್ದಿ ಯಾದ ಜನಪ್ರಿಯ ನಟ ಮಾಸ್ಟರ್ ಆನಂದ್ ಅಷ್ಟೆ ಅಲ್ಲದೆ ಹಿಂದುಸ್ತಾನಿ ಶಾಸ್ತ್ರೀಯ ಗಾಯನದ ಸಾಮ್ರಾಜ್ಞಿ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳಾದ ಶ್ರೀಮತಿ ವೀಣಾ ಹಾನಗಲ್ ,ಹಾಗು ಬೆಂಗಳೂರಿನಿಂದ ಮಧುರ ಕಂಠದ ಖ್ಯಾತ ಗಾಯಕಿ ಶ್ರೀಮತಿ ಅಂಜಲಿ ಹಳಿಯಾಳ್ ಅಗಮಿಸಿದ್ದರು.

ಅರಬ್ ಸಂಯುಕ್ತ ಸಂಸ್ತಾನದಲ್ಲಿ ಕನ್ನಡದ ಶೇಖ್ ಎಂದೆ ಪರಿಚಿತರಾದ ಪ್ರಸಿದ್ದ ಉದ್ಯಮಿ ಶ್ರೀ ಬಿಅರ್ ಶೆಟ್ಟಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹೊರ ದೇಶದಲ್ಲಿ ಕನ್ನಡಿಗರಿಗಾಗಿ ಅನೇಕ ಸಮಾಜಮುಖಿ ಕಾರ್ಯ ಗಳಲ್ಲಿ ತೊಡಗಿ ಕೊಂಡಿರುವ ಹಾಗು ಈ ಮೂಲಕ ಅನೇಕ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರಿ ಬಿಅರ್ ಶೆಟ್ಟಿಯವರು ಕನ್ನಡಿಗರು ಮುಂಚೂಣಿಯಲ್ಲಿದ್ದು ಹೊರ ದೇಶದಲ್ಲಿ ಒಗ್ಗಟ್ಟಿನಿಂದ ಒಂದಾಗಿ ಬಾಳಬೇಕು‌. ಕನ್ನಡದ ಭಾಷಾಭಿಮಾನ ಮುಂದಿನ ಪೀಳಿಗೆಯವರು ಉಳಿಸಿಕೊಳ್ಳುವಂತಾಗಬೇಕು ಎಂಬ ಕಳಕಳಿಯ ಕರೆ ನೀಡಿದರು.

ಈಗಾಗಲೆ ಅನೇಕ ಪ್ರಶಸ್ತಿಗಳ ಜೊತೆಗೆ ಭಾರತದ ಸರ್ಕಾರದಿಂದ ಪದ್ಮಶ್ರಿ ಪ್ರಶಸ್ತಿಗೂ ಭಾಜನರಾಗಿರುವ ಶ್ರಿಯುತ ಬಿಅರ್ ಶೆಟ್ಟಿಯವರಿಗೆ ಕನ್ನಡಿಗರು ದುಬೈ ಬಳಗವು “ಯು ಎ ಇ ಕರ್ನಾಟಕದ ಕಣ್ಮಣಿ “ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

ದಾವಣಗೆರೆ ಜಿಲ್ಲೆಯಲ್ಲಿ ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಕಲಾಪದಲ್ಲಿ ತೊಡಗಿಸಿಕೊಂಡ,ನೆಚ್ಚಿನ ಜನನಾಯಕ ಮಾಜಿ ಸಂಸದರಾದ ಶ್ರೀ ಶ್ಯಾಮನೂರು ಶಿವಶಂಕರಪ್ಪ ಅವರಿಗೆ “ಕರ್ನಾಟಕ ರತ್ನ ” ಎಂಬ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಕಾರಣಾಂತರಗಳಿಂದ ಅವರು ಸಮಾರಂಭದಲ್ಲಿ ಉಪಸ್ಥಿತರಾಗದ ಕಾರಣ ಅವರ ದ್ವಿತೀಯ ಪುತ್ರ ಶ್ರೀ ಎಸ್ಎಸ್ ಗಣೇಶ್ ಹಾಗು ರೇಖಾ ದಂಪತಿಗಳು ಅವರ ಪರವಾಗಿ ಈ ಗೌರವಾನ್ವಿತ ಪ್ರಶಸ್ತಿ ಯನ್ನು ಸ್ವೀಕರಿಸಿದರು.

ಶ್ರೀ ಎಸ್ಎಸ್ ಗಣೇಶ್ ಸಭೆಯನ್ನು ಉದ್ದೇಶಿಸಿ ಕನ್ನಡ ನಾಡು ನುಡಿಗಳ ಹಿರಿಮೆಯ ಕುರಿತು ಮಾತನಾಡುತ್ತಾ ರಾಜ್ಯೋತ್ಸವ . ನಿತ್ಯೋತ್ಸವವಾಗಬೇಕು ,ಅನಿವಾಸಿ ಕನ್ನಡಿಗರು ದುಬೈ ಶ್ರೀಮಂತ ದೇಶದಲ್ಲೂ ಕನ್ನಡದ ತೇರನ್ನು ಎಳೆಯಬೇಕು ಎಂದು ಪ್ರೇಕ್ಷಕರಲ್ಲಿ ಉತ್ಸಾಹ ತುಂಬುವ ಸಂದೇಶ ನೀಡಿದರು‌.

ತಾಯಿನಾಡಿನಿಂದ ಆಗಮಿಸಿದ ಜನಪ್ರಿಯ ಚಲನ ಚಿತ್ರನಟ, ಬಾಲ ಕಲಾವಿದನಾಗಿಯೂ ಜನ ಮನ್ನಣೆ ಗಳಿಸಿದ ಮಾಸ್ಟರ್ ಅನಂದ್ ಅವರಿಗೆ ಅವರ ಕಲಾ ಸೇವೆಯನ್ನು ಗುರುತಿಸಿ ಕನ್ನಡಿಗರು ದುಬೈ ಬಳಗದ ವತಿಯಂದ “ಸಕಲ ವಲ್ಲಭ ಮಾಸ್ಟರ್ ಆನಂದ್ ” ಗೌರವ ಪ್ರಶಸ್ತಿ ಯನ್ನು ನೀಡಿ ಪುರಸ್ಕರಿಸಿತು.

ಗೌರವಾನ್ವಿತ ಗಣ್ಯರಿಗೆ ಶಾಲು ಹೊದೆಸಿ ಹೂಗುಚ್ಛಗಳು, ಸ್ಮರಣಿಕೆಗಳು , ಕರ್ನಾಟಕದ ಹೆಮ್ಮೆಯ ಕಿರೀಟವಾದ ಮೈಸೂರು ಪೇಟವನ್ನು ತೊಡಿಸಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ದುಬೈ ನಗರದ ವಿವಿಧ ಕಲಾ ಕೇಂದ್ರದ ಮಕ್ಕಳಿಂದ ಸಮೂಹ ಗಾಯನ, ವಾದ್ಯ ಗೋಷ್ಠಿ ಹಾಗು ಮನ ಸೂರೆಗೊಳ್ಳುವ ಸಾಮೂಹಿಕ ನೃತ್ಯ ಪ್ರದರ್ಶನಗಳು ಪ್ರೇಕ್ಷರನ್ನು ಮನರಂಜಿಸುತ್ತಾ ಅಮೋಘವಾದ ರಸಸಂಜೆಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಹುಬ್ಬಳ್ಳಿ ಯಿಂದ ಆಗಮಿಸಿದ ಶಾಸ್ರೀಯ ಸಂಗೀತ ಗಾಯಕಿ ಶ್ರೀಮತಿ ವೀಣಾ ಹಾನಗಲ್ ಅವರಿಂದ ಸುಶ್ರಾವ್ಯ ಶಾಸ್ತ್ರೀಯ ಗಾಯನವಿತ್ತು. ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ಹಾನಗಲ್ ಅವರ ಗಾಯನ ಸಿ.ಡಿ.ಯನ್ನು ಮಾಸ್ಟರ್ ಆನಂದ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ರಾದ ಶ್ರೀ ಸರ್ವೋತ್ತಮ್ ಶೆಟ್ಟಿ ಯವರ ಹಸ್ತದಿಂದ ಬಿಡುಗಡೆ ಮಾಡಲಾಯಿತು‌.

ತಾಯಿನಾಡಿನಿಂದ ಎಷ್ಟೆ ದೂರದಲ್ಲಿದ್ದರೂ ಚಿಣ್ಣರ ತಂಡ ಕನ್ನಡದ ಕಂಪನ್ನು ಸಾರುವ ಸಾಂಸ್ಕೃತಿಕ ನೃತ್ಯ ರೂಪಕಗಳನ್ನು ಅಮೋಘವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೈ ರೋಮಾಂಚನಗೊಳಿಸಿದವು. ಮಾಸ್ಟರ್ ಆನಂದ್ ಅವರು ಹಾಸ್ಯ ಚಟಾಕಿಗಳನ್ನು ಹೇಳುತ್ತಾ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು‌.ಅಷ್ಟೆ ಅಲ್ಲದೆ ಜನಪ್ರಿಯ ಕನ್ನಡ ಚಲನಚಿತ್ರ ಗಳ ಹಾಡಿನ ತುಣುಕುಗಳಿಗೆ ಅಮೋಘವಾಗಿ ಅಭಿನಯಿಸಿ ಜನರನ್ನು ರಂಜಿಸಿದರು.

ಬೆಂಗಳೂರಿನಿಂದ ಆಗಮಿಸಿದ ಖ್ಯಾತ ಗಾಯಕಿ ಶ್ರೀಮತಿ ಅಂಜಲಿ ಹಳಿಯಾಳ್ ಅವರು ಮೊದಲಿಗೆ ಹಾಡಿದ ಹಳೆ ಜನಪ್ರಿಯ ಗೀತೆ ಘಿಲ್ ಘಿಲ್ ಘಿಲಕ್ ಕಾಲು ಗೆಜ್ಜೆ ಝಣಕ್ ಹಾಡು ಸಭಿಕರನ್ನು ಕುಣಿಯುವಂತೆ ಮಾಡಿತು‌. ಸಭಿಕರು ಅಮೋಘವಾದ ಮೆಚ್ಚುಗೆಯ ಕರತಾಡನ ಹೊಡೆಯತ್ತಾ ಅವರ ಸುಶ್ರಾವ್ಯ ಹಾಡುಗಳನ್ನು ಆನಂದಿಸಿದರು‌. ದುಬೈ ನಲ್ಲಿ ನೆಲೆಸಿರವ ಸುಮಧುರ ಕಂಠದ ಗಾಯಕ ಉದಯ್ ನಂಜಪ್ಪ ಹಾಗು ಅಂಜಲಿ ಹಳಿಯಾಳ್ ಅವರ ದನಿಯಲ್ಲಿ ಇಂಪಾಗಿ ಮೂಡಿ ಬಂದ ಎಲ್ಲಲ್ಲಿ ನೋಡಲಿ..ಮೆಲ್ಲುಸಿರೆ ಸವಿಗಾನ ಹಾಗು ಒಂದೆ ಒಂದು ಆಸೆಯೂ ” ಹಾಡುಗಳು ನಿಜಕ್ಕೂ ಪ್ರೇಕ್ಷಕರನ್ನು ಸುಂದರವಾದ ಸಂಗೀತ ಲೋಕಕ್ಕೆ ಕರೆದೊಯ್ದು ತೇಲಾಡುವಂತೆ ಮಾಡಿತು‌.

ಶ್ರೀಮತಿ ಅಂಜಲಿ ಹಳಿಯಾಳ್ ಹಾಗು ಉದಯ್ ನಂಜಪ್ಪ ಅವರಿಗೆ ಕನ್ನಡಿಗರು ದುಬೈ ಸದಸ್ಯರು ,ಮಾಸ್ಟರ್ ಆನಂದ್ ಹಾಗು ಅಬುಧಾಬಿ ಕರ್ನಾಟಕ ಸಂಘದ ಅದ್ಯಕ್ಷರಾದ ಸರ್ವೊತ್ತಮ್ ಶಟ್ಟಿ ಅವರು ಸ್ಮರಣಿಕೆಗಳನ್ನು ನೀಡಿ ಗೌರವಿಸಿತು.

ಈ ಸುಂದರವಾದ ಸಾಂಸೃತಿಕ ಕಲಾಮೇಳಕ್ಕೆ ಜೆ ಎಸ್ ಎಸ್ ಶಾಲೆಯ ಸಭಾಂಗಣ ಸಾಕ್ಷಿಯಾಯಿತು‌. ಕಾರ್ಯಕ್ರಮಕ್ಕೆ ತೆರೆ ಎಳೆಯುತ್ತಾ ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷ ಮಲ್ಲಿ ಕಾರ್ಜುನ್ ಗೌಡ ಅವರು ವಂದನಾರ್ಪಣೆ ಮಾಡಿದರು.

ಮರುದಿನ , ನವಂಬರ್ 25 ಶನಿವಾರದಂದು ಸಮಾರಂಭವನ್ನು ಯಶಸ್ವಿಯಾಗಿಸಲು ತೆರೆಮರೆಯಲ್ಲಿ ದುಡಿದ ಕಾರ್ಯಕರ್ತರನ್ನು ಅಭಿನಂದಿಸಲು ಹಾಗು ಬೆಂಗಳೂರಿನಿಂದ ಆಗಮಿಸಿದ ಕಲಾವಿದರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ದುಬೈ ನಲ್ಲಿರುವ ಪೊರ್ಚುನ್ ಗ್ರಾಂಡ್ ಹೋಟಲ್ ನಲ್ಲಿ ಸಂತೋಷಕೂಟವನ್ನು ಏರ್ಪಡಿಸಿದ್ದರು ‌‌.ಇದರಲ್ಲಿ ಅಂಜಲಿ ಹಳಿಯಾಳ್ ಹಾಗು ಉದಯ್ ನಂಜಪ್ಪ ಅವರ ಇಂಪಾದ ಗಾನ ಲಹರಿ ಮತ್ತೆ ನೆರೆದ ಜನರನ್ನು ಮೋಡಿ ಗೊಳಿಸುವಲ್ಲಿ ಯಶಸ್ವಿಯಾಯಿತು ‌‌‌. ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡತಿ ,ಹಾಸ್ಯ ಲೇಖಕಿ ಹಾಗು ಬರಹಗಾರ್ತಿ ಆರತಿ ಘಟಿಕಾರ್ ಅವರು ಹಾಸ್ಯದ ಚುಟುಕು ವಾಚನ ವನ್ನು ಮಾಡಿ ಸಭಿಕರನ್ನು ರಂಜಿಸಿದರು‌. ದುಬೈನ ಕಾರ್ಯಕಾರಿ ಮಂಡಲಿ ಹಾಗು ಕುಟುಂಬದವರು ಈ ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು ‌.

ವರದಿ : ಅನುಪಮಾ ಮಹೇಶ್ , ಮಸ್ಕತ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: