ಗರುಡನೆಂಬ ದೇವ ವಾಹನ

Share Button

 

ಪುರಾತನ ಕಾಲದಿಂದಲೂ ನಮ್ಮ ಧರ್ಮಗಳಲ್ಲಿ, ಪ್ರಾಣಿಪಕ್ಷಿಗಳಿಗೆ ವಿಶೇಷ ಸ್ಥಾನವಿದೆ. ಸಾಮಾನ್ಯ ಯಾವುದಾದರೂ ದೇವಾನುದೇವತೆಗಳ ವಾಹನವಾಗಿಯೋ ಅಥವಾ ಇನ್ನಿತರ ದೇವರುಗಳ ಸಹಾಯಕ ಕಾರ್ಯಗಳಲ್ಲಿನ ಉಲ್ಲೇಖಗಳಿವೆ. ಗರುಡವನ್ನು ಕೂಡ ಮಹಾವಿಷ್ಣುವಿನ ವಾಹನವಾಗಿ ಪ್ರತಿಬಿಂಬಿಸಲಾಗಿದೆ. ಬಹುಶಃ ಪ್ರಾಣಿಪಕ್ಷಿಗಳಿಗೆ ಸಲ್ಲಬೇಕಾದ ಗೌರವ, ಭದ್ರತೆ, ಮತ್ತು ಅವುಗಳ ಮಹತ್ವವನ್ನರಿತ ನಮ್ಮ ಪೂರ್ವಿಕರು ಅವುಗಳ ಸಂತತಿಯ ಉಳಿವಿಗಾಗಿ ಹಾಗೆ ಬಿಂಬಿಸಿರಬಹುದು… ಹಾವನ್ನು ದೇವರೆಂದಿಲ್ಲದಿದ್ದರೆ ಸಿಕ್ಕ ಸಿಕ್ಕ ಕಡೆ ಹೊಡೆದು ಅದರ ಸಂತತಿಗೇ ಕಂಟಕ ಬರುತ್ತಿತ್ತೊ ಏನೋ?

ಈಗಲೂ ನಾಗರಹಾವನ್ನು ದೇವರೆಂದು ಭಯದಿಂದ ಬಿಟ್ಟುಬಿಡುವುದನ್ನು ನಾವು ನೋಡಿರಬಹುದು. ಮನುಷ್ಯ ದೇವರಿಗೆ ಬಿಟ್ಟರೆ ಇನ್ಯಾರಿಗೆ ಹೆದರುತ್ತಾನೆ? ಕೊನೇ ಪಕ್ಷ ದೇವರ ಭಯದಿಂದಾದರು ಅವುಗಳನ್ನು ತಮ್ಮ ಪಾಡಿಗೆ ಬಿಟ್ಟರೆ ಸಾಕೆನ್ನುವ ಉದ್ದೇಶವಿರಬಹುದು ಅಲ್ವ? ನನ್ನ ಅಭಿಪ್ರಾಯ, ನೀವೂ ಒಮ್ಮೆ ಯೋಚಿಸಿ… ಕಾಗೆಯಿಂದ ಹಿಡಿದು ಗೂಬೆ, ನವಿಲು ಇತ್ಯಾದಿ ಪಕ್ಷಿಗಳು, ಹುಲಿ ಸಿಂಹ ಆನೆ ಕೋಣ ಇತ್ಯಾದಿಗಳು ಯಾವುದಾದರೂ ದೇವರ ವಾಹನ ಅಲ್ಲವಾ?.

 

– ಸ್ವರೂಪ್ ಭಾರದ್ವಾಜ್

.

2 Responses

  1. Shruthi Sharma says:

    ನಿಮ್ಮ ಬರಹ ತುಂಬಾ ಚೆನ್ನಾಗಿದೆ. ಪ್ರಾಣಿ ಪಕ್ಷಿ ಮರ ಗಿಡಗಳನ್ನು ದೈವಿಕ ಭಾವದಿಂದ ನೋಡುವ ಭಾರತೀಯ ಸಂಸ್ಕೃತಿ ಅವುಗಳಿಗೂ ರಕ್ಷಣೆಯನ್ನು ಕೊಡುತ್ತವೆ ಎಂಬ ಅಂಶ ಸತ್ಯ..

  2. Pallavi Bhat says:

    ಪ್ರಾಣಿಪಕ್ಷಿಗಳಿಗೂ ನಮ್ಮಷ್ಟೆಯೇ ಬದುಕುವ ಹಕ್ಕಿದೆ ಎಂದು ನೆನಪಿಸುತ್ತದೆ ನಿಮ್ಮ ಈ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: