Monthly Archive: November 2019

8

ನೆನಪಿನ ಹೆಜ್ಜೆಗೆ ಗೆಜ್ಜೆಯ ಕಟ್ಟಿ..

Share Button

ಬರವಣಿಗೆಯ ಬಗ್ಗೆ ಅತೀವ ಆಸಕ್ತಿಯನ್ನೂ, ಮುಗಿಯದ ಕುತೂಹಲವನ್ನೂ, ಜೊತೆಗೆ ಅವುಗಳ ಕುರಿತಾದ ಅನೇಕ ಶಂಕೆಯನ್ನು ಇಟ್ಟಿಕೊಂಡು ನಾನೇನು ಬರೆಯಲಾರೆ ಅನ್ನುತ್ತಲೇ ಈಗಾಗಲೇ ಅಕ್ಷರದ ಪಯಣದಲ್ಲಿ ರಹದಾರಿಯನ್ನು ಕ್ರಮಿಸಿರುವಾಕೆ ಸುನೀತ ಕುಶಾಲನಗರ. ಕತೆ, ಕವಿತೆ,ಪ್ರಬಂಧ, ಅನುವಾದ ಎಲ್ಲದ್ದಕ್ಕೂ ಸೈ ಎನ್ನುತ್ತಲೇ ಅವುಗಳೆಲ್ಲದರೊಂದಿಗೆ  ಏಕಕಾಲದಲ್ಲಿ ತೊಡಗಿಸಿಕೊಳ್ಳುತ್ತಾ, ನಾನಿನ್ನೂ ಕಲಿಯುವುದು ಸಾಕಷ್ಟಿದೆ...

6

ಎಷ್ಟು ತೂಕದ ಪ್ರೀತಿಯಿದು…

Share Button

.   ಹುಡುಕಾಟಕೆಂಥ ಸುಖವಿತ್ತೆ ಗೆಳತಿ ಹೊದ್ದ ಕಂಬಳಿ ತುಂಬ ಬಚ್ಚಿಟ್ಟ ಗುಟ್ಟುಗಳು. ಕಪಾಟಿನಲಿ ಕಾದಂಬರಿ ಗುರುತಿಗೆ ಗುಲಾಬಿಯದೊಂದು ಒಣಪಕಳೆ ಗೋಡೆಯೆದೆ ಮೇಲೆ ವಿರಹಗೀತೆ ಚಾವಣಿಯಲಿ ಲೆಕ್ಕವಿರದಷ್ಟು ಚಹರೆ . ಆರಾಮಿದ್ದೆ  ಒಟ್ಟಿನಲ್ಲಿ ಯಾರದೋ ಕಣ್ಣಿನೊಳಗೆ ನನ್ನ ಹುಡುಕುತ್ತಾ ಕನ್ನಡಿಯಲಿ ಕಾಮನಬಿಲ್ಲು ಕಾಣುತ್ತಾ… . ಆರಾಮಿಗೂ ಬೋರಾಯಿತೋ ಏನೊ...

4

ಎಚ್ಚರ ಗೋಪಿ

Share Button

ಎಚ್ಚರ ಗೋಪಿ ಎಚ್ಚರ ಗೊಲ್ಲ ಗೋಪ ಕದ್ದು ಬರುವ ಮೆಲ್ಲ ಸೆರಗ ಸೆಳೆದು ಬಿಡುವ ಎಚ್ಚರ ಗೋಪಿ ಎಚ್ಚರ ಸದ್ದು ಹರಡದಂತೆ ಹೊರಗೆ ಕಡೆವ ಕೋಲ ಮೆಲ್ಲ ಮಥಿಸು ಬೆಣ್ಣೆ ಬೆರಳು ಮೂಸಿ ಬರುವ ಮುರಳಿಯಾಡಿ ಮರುಳುಮಾಡಿ ನವನೀತ ಮೆದ್ದು ಬಿಡುವ ಗಡಿಗೆಯಂಚು ಬಿಡದೆಕುಡಿವ ಎಚ್ಚರ ಗೋಪಿ...

3

ಸುಂದರ ನಿಸರ್ಗ, ಆಗದಿರಲಿ ನರಕ

Share Button

ಮಾನವ ಇತ್ತೀಚಿಗೆ ಸ್ವಾರ್ಥ , ದುರಾಸೆ, ಅಹಂಕಾರಗಳ  ಗಣಿಯೇ ಆಗಿದ್ದಾನೆ. ಇಡೀ ಲೋಕದಲ್ಲಿ ತನ್ನದೊಬ್ಬನದ್ದೇ ಆಡಳಿತ ಅನ್ನುವ ಹಾಗೆ ಮೆರೆಯುತ್ತಿದ್ದಾನೆ. ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ, ಅಪರಿಮಿತವಾದ  ವಾಹನ ಬಳಕೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ , ಕಸ ಎಸಿಯುವುದು  ಇವುಗಳು ಮಾನವನ  ಅಹಂಕಾರ ಹಾಗೂ ಅನಾಗರಿಕತೆಯ  ಪ್ರತೀಕ. ಹಸಿರಾದ ...

5

ಖಾಸಗಿ ಕನಸು…!

Share Button

ನಿಮಗೆ ಗೊತ್ತಿಲ್ಲವಿದು.., ನನ್ನೆದೆಯ ಖಾಸಗಿ ವಿಷಯ ಒಂದು ಹೀಗಿದೆ ಎಂದು…! ಈ ಮಾಧವ ಆ ಮಿಲಿಂದರ ಮೇಲೆ ಹರೆಯದಿಂದಲೂ ನನಗೆ ಮನಸ್ಸೆಂದರೆ ಮನಸ್ಸೆಂದು.. ನನ್ನಿರುಳ ಕನಸ ತಿಜೋರಿಗೆ ಕನ್ನ ಹಾಕಿದ್ದರರೀರ್ವರು ! ಮೊಗೆದು ಕೊಟ್ಟಿದ್ದರು ಅಕ್ಷಯ ಭಂಡಾರದ ಒಲವನು. ಬಿಡಿ, ಅದೆಲ್ಲಾ ಬರಿದಾಗುವ ಬರಿಯ ಮೋಹಕ ಮಾತಾಗಿರಲಿಲ್ಲ.. ಆಗೀಗ ತೆರೆಯ ಮೇಲೆ ವಿರಳವಾಗಿ ಕಂಡತೆ, ಈ ತರಳೆ ಮನಸ್ಸು...

10

ಮತ್ತೆ ಚಿಗುರಿದಾಗ….

Share Button

  ಅದೊಂದು ಹಣ್ಣಿನ ಗಿಡ. ಸಣ್ಣ ಗಾತ್ರದ ಮರವೆಂದರೂ ಅಡ್ಡಿಯಿಲ್ಲ. ಬಹುಶಃ ಯಾರೂ ಅದನ್ನು ಅಲ್ಲಿ ನೆಟ್ಟದ್ದಲ್ಲ ಅನ್ನಿಸುತ್ತದೆ. ಆ ಮರಕ್ಕೆ ಮನಸೋ ಇಚ್ಛೆ ಬೆಳೆಯೋ ಸ್ವಾತಂತ್ರ್ಯವೂ ಇಲ್ಲ ಏಕೆಂದರೆ ಆ ಮರದ ಎಡಗಡೆಗೆ ಪಾಗಾರ ಗೋಡೆ, ಮುಂದುಗಡೆ ರಸ್ತೆ, ಎತ್ತರಕ್ಕೆ ಬೆಳೆದರೆ ತಾಗುವ ವಿದ್ಯುತ್ ತಂತಿಗಳು....

2

ಹಳೆಯ ವಸ್ತುವಿಗೆ ಹೊಸ ರೂಪ

Share Button

ಕಸದಿಂದ ರಸ ಎನ್ನುವ ಮಾತುಜನ ಜನಿತ. ಇದು ಮನೆಯ ಅಲಂಕಾರಕ್ಕೂ ಅನ್ವಯವಾಗುತ್ತದೆ. ಬೇಡವೆಂದು ಬಿಸಾಡುವ ವಸ್ತುಗಳಿಗೆ ಹೊಸ ರೂಪು ನೀಡಿ ಮನೆಯ ಅಂದ ಹೆಚ್ಚಿಸಲು ಸಾಧ್ಯವಿದೆ. ಇದಕ್ಕೆ ಒಂದಷ್ಟು ಕ್ರಿಯಾಶೀಲತೆ ಮತ್ತು ತಾಳ್ಮೆ ಇದ್ದರೆ ಸಾಕು. ಮನೆಯಲ್ಲಿರುವ ಹಳೆಯ ವಸ್ತುಗಳನ್ನು ವ್ಯರ್ಥವೆಂದು ಬಿಸಾಡುವವರು ಸಾಕಷ್ಟು ಜನರಿದ್ದಾರೆ. ಇವುಗಳಲ್ಲಿ...

4

ಆಕರ್ಷಿಸಿದ ಮುಟ್ಟಾಳೆಯ ಮಳಿಗೆ

Share Button

ಜನಮನದಿಂದ ಮರೆಯಾಗುತ್ತಿರುವ ಅಡಿಕೆ ಹಾಳೆಯ ಮುಟ್ಟಾಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನದಲ್ಲಿ   ಆಕರ್ಷಣೆಗೆ ಪಾತ್ರವಾಗಿದೆ. ಈ ಕರಕುಶಲ ವಸ್ತು ಕೃಷಿಕರಿಗೆ ಅಚ್ಚುಮೆಚ್ಚಿನದಾಗಿದೆ. ದಕ್ಷಿಣಕನ್ನಡದಲ್ಲಿ ಬಿಸಿಲಿನ ಬೇಗೆಯಲ್ಲಿ ಮನೆಯ ಹೊರಗಿನಗದ್ದೆ, ತೋಟ, ಹಿತ್ತಲಿನಲ್ಲಿ ದುಡಿಯುವುದೇ ಹೆಚ್ಚು. ಆ ಬಿಸಿಲಿನ ತಾಪವನ್ನು ತಡೆದುಕೊಳ್ಳಲು ಉಪಕಾರಿಯಾಗಿರುವುದೇ ಅಡಿಕೆ ಹಾಳೆಯಿಂದ ತಯಾರಿಸಲಾದ...

2

ಭಾರತೀಯ ನೃತ್ಯಕ್ಕೆ ’ವಿದೇಶಿ’ ಹೆಜ್ಜೆ

Share Button

ಹಲವರು ಪಾಶ್ಚಾತ್ಯ ನೃತ್ಯಕ್ಕೆ ಮಾರುಹೋಗುವುದು ಸಾಮಾನ್ಯ. ಆದರೆ, ಪಾಶ್ಚಾತ್ಯರೇ ಭಾರತೀಯ ನೃತ್ಯಕಲಿತರೆ? ಹಾಗೆ ಕಲಿತ ನೃತ್ಯವನ್ನುಭಾರತೀಯ ಪ್ರತಿಭೆಗಳಂತೆಯೇ ಪ್ರಸ್ತುತಪಡಿಸಿದರೆ?ಇದಕ್ಕೆ ಸಂಬಂಧಿಸಿದ ಕುತೂಹಲವನ್ನುತಣಿಸುವ ಹಾಗೆಯೇಈ ಸಲದ ಲಕ್ಷದೀಪೋತ್ಸವ ಕಂಗೊಳಿಸಿತು.ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಡಿ.ಎಂ ಪೌಢ ಶಾಲಾ ಆವರಣದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮಕ್ಕೆ ಸಿದ್ಧಪಡಿಸಿರುವ ವಸ್ತುಪ್ರದರ್ಶನ ಮಂಟಪದಲ್ಲಿ ಜರ್ಮನಿಯ...

1

ಹಳ್ಳಿಯ ಅಂದ ನೆನಪಿಸಿದ ಮಡಿಕೆಯ ಮಳಿಗೆ

Share Button

ಅಳಿವಿನಂಚಿರುವ ಹಳ್ಳಿಯ ಕಸುಬುಗಳನ್ನು ಉಳಿಸಿ ಬೆಳೆಸುವ ಸಂದೇಶವನ್ನು ಸಾರುತ್ತಾ, ಹಳ್ಳಿಯ ವಾತಾವರಣವನ್ನು ಸೃಷ್ಟಿಸಿದ ದೃಶ್ಯಕಂಡು ಬಂದದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಸಿದ್ಧ ಪಡಿಸಿರುವ ವಸ್ತುಪ್ರದರ್ಶನದ ಮಳಿಗೆಯಲ್ಲಿ.  ಈ ಮಳಿಗೆಯಲ್ಲಿದ್ದ ಮಣ್ಣಿನ ದಿನೋಪಯೋಗಿ ವಸ್ತುಗಳ ಪ್ರದರ್ಶನ ಆಕರ್ಷಣೀಯವಾಗಿತ್ತು. ಇದರ ರೂವಾರಿ ಕಾಯರ್‌ತಡ್ಕ ನಿವಾಸಿ ಸಂಜೀವ ಮತ್ತು ಕೇಶವ ಕುಂಬಾರ....

Follow

Get every new post on this blog delivered to your Inbox.

Join other followers: