Category: ಪೌರಾಣಿಕ ಕತೆ

4

ನವಗ್ರಹಗಳ ಒಡೆಯ ಸೂರ್ಯ

Share Button

ಜಗತ್ತಿನ ಎಲ್ಲ ಚರಾಚರ ವಸ್ತುಗಳ ಅಸ್ಥಿತ್ವಕ್ಕೆ ಕಾರಣನಾದವನು, ಅವುಗಳಿಗೆ ಚೇತನ ನೀಡುವವನು, ಜೀವ ತುಂಬುವವನು, ದಿನ ಬೆಳಗಾಗಲು ಕಾರಣನಾದವನು ಪ್ರತಿಯೊಬ್ಬರೂ ಮಾಡುವ ಕರ್ಮಗಳಿಗೆ ಸಾಕ್ಷಿಯಾಗುವವನು, ಪಂಚಭೂತಗಳಾದ ಪೃಥ್ವಿ, ಅಪ್, ತೇಜ, ವಾಯು, ಆಕಾಶ ಇವುಗಳನ್ನು ಜಾಗೃತಾವಸ್ಥೆಗೆ ತರುವವನು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ಉದ್ದ ಬೆಳೆಯುತ್ತದೆ....

5

ಮಹರ್ಷಿ ಮೈತ್ರೇಯ

Share Button

ಲೋಕದಲ್ಲಿ ಒಳ್ಳೆಯವರೂ ಇದ್ದಾರೆ ಕೆಟ್ಟವರೂ ಆಗಿ ಹೋಗ್ತಾರೆ. ಕೆಟ್ಟವರು ಒಳ್ಳೆಯವರಾಗಲೂಬಹುದು. ಅಂದರೆ, ಕೆಟ್ಟವರಲ್ಲಿ ಮೂರು ತೆರನಾಗಿ ವಿಂಗಡಿಸಬಹುದು. ತಿಳಿಯದೆ ತಪ್ಪು ಮಾಡುವವರು, ತಿಳಿದು ಮಾಡುವವರು, ಇನ್ನು ಬೇರೆಯವರ ಸಹವಾಸ ದೋಷದಿಂದ ದುಷ್ಪರಾಗಿ ಬಿಡುವುದು. ತಿಳಿಯದೆ ತಪ್ಪು ಮಾಡಿದವರು ಮತ್ತೆ ತಮ್ಮನ್ನು ತಿದ್ದಿಕೊ೦ಡು ಪರಿವರ್ತನೆಯಾಗಬಹುದು. ಆದರೆ ತಿಳಿದೂ-ತಿಳಿದೂ ದುಷ್ಕೃತ್ಯ...

6

ವೇದವ್ಯಾಸರ ಆಪ್ತ ಶಿಷ್ಯ ಲೋಮಶ

Share Button

ವಿದ್ಯಾರ್ಥಿ-ಗುರು ಸಂಬಂಧವೆಂದರೆ ಅದು ಪಾರದರ್ಶಕವಾದುದು. ಶಿಕ್ಷಣದಲ್ಲಿ ಮುಚ್ಚುಮರೆಯಿಲ್ಲ. ಉತ್ತಮ ಗುರು ತನ್ನೆಲ್ಲ ಜ್ಞಾನವನ್ನು ಶಿಷ್ಯನಿಗೆ ಧಾರೆಯೆರೆಯುತ್ತಾನೆ.ಆದರೆ ಎಷ್ಟು ಜನ ವಿದ್ಯಾರ್ಥಿಗಳು ಗುರುಗಳು ಕಲಿಸಿದ್ದನ್ನು ಅರ್ಥೈಸಿಕೊಳ್ಳುತ್ತಾರೆ, ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಕೆಲವರಂತೂ ಶಿಕ್ಷಕರು ಪಾಠ ಮಾಡುವ ವೇಳೆ ತಮ್ಮ ಮನಸ್ಸನ್ನು ಬೇರೆಲ್ಲೋ ನೆಟ್ಟು ವ್ಯವಹರಿಸುತ್ತಿರುತ್ತಾರೆ....

5

ನವನಿಧಿಗಳ ಒಡೆಯ ಕುಬೇರ

Share Button

ಧಾರಾಳ ದಾನ ಮಾಡುವವರನ್ನು ನಮ್ಮಲ್ಲಿ ‘ದಾನಶೂರ ಕರ್ಣ’ನೆಂದೂ ನ್ಯಾಯ-ಧರ್ಮ ಎಂದು ಬದುಕುವವರನ್ನು ಅವನೊಬ್ಬ ಧರ್ಮರಾಯನೆಂದೂ ಮಾತು ಮಾತಿಗೆ ಭೀಕರ ಪ್ರತಿಜ್ಞೆಯನ್ನು ಹೇಳುವಾತನನ್ನು ‘ಭೀಷ್ಮ’ ಎಂದೂ ಸತ್ಯವನ್ನೇ ಹೇಳುವಾತನನ್ನು ‘ಸತ್ಯ ಹರಿಶ್ಚಂದ್ರ’ನೆಂದೂ ಅಧಿಕ ಶಕ್ತಿ ಇದ್ದ ಬಲಾಡ್ಯನನ್ನು ನೀನೊಬ್ಬ ‘ಬಲಭೀಮ’ನೆಂದೂ ಧನ-ಕನಕ ಉಳ್ಳವನಂತೆ ವರ್ತಿಸುವಾತನನ್ನು ‘ಕುಬೇರ’ ಎಂದೂ ಹೀಗೆ...

4

ಗೌತಮ ಋಷಿಯ ಗಣ್ಯ ಗುಣ

Share Button

‘ದಾನ’ ಎಂಬುದು ಜೀವನ ಮೌಲ್ಯಗಳಲ್ಲಿ ಒಂದು. ‘ಇದ್ದಾಗ ದಾನವನು ಮಾಡದವ ಹೊಲೆಯ’ ಎಂದು ಸರ್ವಜ್ಞ ವಚನವಿದೆ. ದಾನಗಳಲ್ಲಿ ಹಲವು ವಿಧ. ಅಶನ,ವಸನ, ವಸತಿ,ಭೂಮಿ,ಧನ, ಕನಕ, ವಿದ್ಯೆ ಹೀಗೆ ಅವರವರ ಶಕ್ತಿ ಭಕ್ತ್ಯಾನುಸಾರ ದಾನ ಮಾಡಬಹುದು. ಆದರೆ ಎಲ್ಲಾ ದಾನಗಳಿಂದಲೂ ಅನ್ನದಾನವೇ ಶ್ರೇಷ್ಠವೂ ಸರಳವೂ ಆಗಿದೆ. ಯಾಕೆಂದರೆ ಹಸಿದು...

5

ಸ್ಮೃತಿಕಾರ ಯಾಜ್ಞವಲ್ಕ್ಯ

Share Button

ಯಾವುದೇ ಒಂದು ಕೆಲಸವನ್ನು ಗುರಿಯಿಟ್ಟು ಆಸ್ಥೆ ವಹಿಸಿ ಪೂರೈಸಿದಾಗ ಅದನ್ನು ಸಾಧಿಸಿದ ಸಾರ್ಥಕ ಭಾವ ನಮ್ಮದಾಗುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ಅದು ಕೂಡಲೇ ನಾಶವಾದರೆ …ಹೇಗಾಗಬೇಡ?. ನಾಶವಾಗಲು ಕಾರಣರಾದವರ ಮೇಲೆ ಅಸಾಧ್ಯ ಸಿಟ್ಟು ಬರುತ್ತದೆ. ಹಾಗೆಯೇ ನಾವು ಇಷ್ಟಪಟ್ಟು  ಒಂದು ವಿದ್ಯೆಯನ್ನು ಗುರುಮುಖೇನ ಕಲಿಯುತ್ತೇವೆ ಎಂದಿಟ್ಟುಕೊಳ್ಳಿ....

5

ಪರಮಾತ್ಮನ ಮಂತ್ರಿಯೆನಿಸಿದ ‘ಉದ್ಧವ’

Share Button

ಸಮಾಜದಲ್ಲಿ ಯಾವುದೇ ಯೋಗ್ಯ ಸ್ಥಾನಮಾನ, ಐಶ್ವರ್ಯ, ಸತ್ಕೀರ್ತಿ ದೊರಕಲು ನಾವು ಪಡೆದುಕೊಂಡು ಬಂದಿರಬೇಕು ಎಂದು ಮಾತಿದೆ. ಅರ್ಥಾತ್ ಅದು ಪೂರ್ವಯೋಜಿತ ಕರ್ಮಫಲಗಳೊಂದಿಗೆ ದೈವಾನುಗ್ರಹ ಎಂಬ ನಂಬಿಕೆಯಲ್ಲಿ ಆ ನುಡಿ ಬಂದಿದೆ. ನಾವು ಅನುಭವಿಸುವ ನಿರೀಕ್ಷಿಸುವ ಸಕಲ ಕಾಮನೆಗಳೂ ಅಷ್ಟೇ. ಹಿಂದಿನ ಅರಸರ ಆಳ್ವಿಕೆಯಲ್ಲಿ ರಾಜನಮಂತ್ರಿ, ರಾಜಪುರೋಹಿತ, ರಾಜವೈದ್ಯ...

5

ವ್ಯಾಕರಣ ಶಾಸ್ತ್ರಕಾರ ಪಾಣಿನಿ

Share Button

ಮನುಜನಿಗೆ ಭೂಮಿಯಲ್ಲಿ ಆಗುವ ಮದುವೆಗೆ ; ಗಂಡಿಗೆ ಹೆಣ್ಣು ಯಾರು, ಹೆಣ್ಣಿಗೆ ಗಂಡು ಯಾರು? ಎಂಬುದಾಗಿ ಭೂಮಿಗೆ ಬರುವ ಮೊದಲೇ ನಿರ್ಣಯಿಸಲ್ಪಡುತ್ತದೆಯಂತೆ. ಹಾಗೆಂದು ಪ್ರಾಯ ಬಂದ ಮಕ್ಕಳಿಗೆ ಹಿರಿಯರು ನೋಡಿ ಮಾಡುವುದನ್ನು ಕಾಣುತ್ತೇವೆ. ಮಕ್ಕಳಿಗೆ ಸಂಗಾತಿ ಯಾರೆಂದು ಅನ್ವೇಷಣೆ ಮಾಡಿ ಕುಲಗೋತ್ರ ವಿಚಾರಿಸಿ  ಕೂಡಿ ಬಂದರೆ ವಿವಾಹ...

7

ತ್ರಿಮೂರ್ತಿ ರೂಪ ದತ್ತಾತ್ರೇಯ

Share Button

ಅಧಿಕಾರ ಮತ್ತು ಸದವಕಾಶಗಳು ಸಿಕ್ಕಿದಾಗ ಹೆಣ್ಣು ಮಕ್ಕಳನ್ನು ಸತ್ವ ಪರೀಕ್ಷೆಗೊಡ್ಡುವುದು, ಪಾತಿವ್ರತ್ಯ ಪರೀಕ್ಷಿಸುವುದು ಮೊದಲಾದ ದೃಷ್ಟಾಂತಗಳು ನಮ್ಮ ಪುರಾಣದಲ್ಲಿ ಸಾಕಷ್ಟು ಸಿಗುತ್ತದೆ. ಈ ನಿಟ್ಟಿನಲ್ಲಿ ಅಗ್ನಿಪರೀಕ್ಷೆಗೊಳಗಾದವರಲ್ಲಿ  ಸೀತೆ ಮೊದಲಿನವಳಾದರೆ; ಅತ್ರಿ ಮುನಿಯ ಪತ್ನಿ ಅನಸೂಯಾ, ಹರಿಶ್ಚಂದ್ರನ ಹೆಂಡತಿ ಚಂದ್ರಮತಿ ಮೊದಲಾದವರು ನೆನಪಿಗೆ ಬರುತ್ತಾರೆ. ಕೆಲವೊಮ್ಮೆ ಹೀಗೆ ಪರೀಕ್ಷೆ...

7

‘ಸಾಂದೀಪನಿ’ ಮಹರ್ಷಿ ಅಪೇಕ್ಷಿಸಿದ ಗುರುದಕ್ಷಿಣೆ

Share Button

ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು . ಹಾಗೆಯೇ ವಿದ್ಯಾರ್ಜನೆ ಮಾಡಿದ ಮೇಲೆ ಗುರುದಕ್ಷಿಣೆಯನ್ನೂ ಕೊಡಬೇಕು. ಗುರುವಿಲ್ಲದೆ ಅಥವಾ ಗುರುದಕ್ಷಿಣೆ ಇಲ್ಲದೆ ಕಲಿತ ವಿದ್ಯೆ ಸಿದ್ಧಿಸಲಾರದು. ಅಥವಾ ಪ್ರಯೋಜನಕ್ಕೆ ಬಾರದು. ಇದು ಸನಾತನದಿಂದಲೇ ಬಂದ ಅನುಭವ. ಇಂತಹ ಗುರುದಕ್ಷಿಣೆಯನ್ನು ಯಾವ ರೂಪದಿಂದಲೂ ಕೊಡುತ್ತಿದ್ದರು. ಧನ, ಕನಕ, ಭೂಮಿ, ವಸ್ತ್ರ...

Follow

Get every new post on this blog delivered to your Inbox.

Join other followers: