Author: Vijaya Subrahmanya

6

ಕೃಷ್ಣನ ಆಪ್ತಸಖ ಪಾರ್ಥ

Share Button

ಅರ್ಜುನನೆಂದರೆ ತಿಳಿಯದವರಾರು? ಪರಾಕ್ರಮಶಾಲಿ, ಶ್ರೀಕೃಷ್ಣನ ಆಪ್ತ ಸಖ. ಮಾತ್ರವಲ್ಲ ಸೋದರತ್ತೆಯ ಮಗನೂ ಹೌದು. ಎಲ್ಲಿ ಅರ್ಜುನನಿದ್ದಾನೋ ಆತನಿಗೆ ನೆರಳಾಗಿ ಕೃಷ್ಣನೂ ಇದ್ದಾನೆ ಎಂಬ ಮಾತಿದೆ. ಅರ್ಜುನನ ಜನನ:  ಚಂದ್ರ ವಂಶದಲ್ಲಿ ವಿಚಿತ್ರವೀರ್ಯನ ಮಗನೆ  ಪಾಂಡು ಚಕ್ರವರ್ತಿ. ಈ ಪಾಂಡು ಹಾಗೂ ಕುಂತಿಯರ ಪುತ್ರನೇ ಅರ್ಜುನ. ಪಂಚಪಾಂಡವರಲ್ಲಿ ಮೂರನೆಯವ....

5

ಜಡಭರತ ಮಹಾಮುನಿ ಎನಿಸಿದ ಬಗೆ…?

Share Button

ಎಲ್ಲವನ್ನೂ ಬಲ್ಲ ಸಕಲಗುಣ ಸಂಪನ್ನರೆಂದು ಮಾನವರಿಗೆ ಕರೆಸಿಕೊಳ್ಳುವುದಕ್ಕೆ ಕಷ್ಟ ಸಾಧ್ಯವೇ ಸರಿ. ಯಾರೂ ಪರಿಪೂರ್ಣರಾಗಲಾರರು. ಹಾಗೆಯೇ ಸಮಯ,ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ; ಬಾಲ್ಯದಲ್ಲೇ ಮಂದಬುದ್ಧಿಯೆನಿಸಿಕೊಂಡವರು ಮುಂದೆ ಚುರುಕು ಬುದ್ಧಿಯವರಾಗಬಹುದು. ಚುರುಕಿನವರು ಬುದ್ಧಿಹೀನರೂ ಸೋಮಾರಿಗಳೂ ಆಗಬಹುದು, ಉತ್ಸಾಹಿಯಾಗಿದ್ದವ ನಿರುತ್ಸಾಹಿಯಾಗಬಹುದು. ಅಂತೆಯೇ ಅರೆಹುಚ್ಚನಂತೆ ಕಾಣಿಸುತ್ತ ಅಪ್ರಯೋಜಕನೆನಿಸಿದವನೊಳಗೆ ಆತ್ಮಜ್ಞಾನ ತುಂಬಿದ್ದು, ಮುಂದೆ ಸಮಾಜೋದ್ಧಾರಕನಾಗಬಹುದು....

5

ಪುರಾಣ ಶ್ರೇಷ್ಠ ಕಪಿಲ ಮಹಾಮುನಿ

Share Button

‘ಕಪಿಲ, ಪತಂಜಲ, ಗೌತಮ, ಜಿನನುತ ಭಾರತ ಜನನಿಯ ತನುಜಾತೆ! ಜಯಹೇ ಕರ್ನಾಟಕ ಮಾತೆ!‘ ಇದು ನಾಡಗೀತೆ-ಸುಪ್ರಸಿದ್ಧ ಕವಿ ಕುವೆಂಪುರವರ ರಚನೆ, ಕಪಿಲ, ಪತಂಜಲ, ಗೌತಮ ಮೊದಲಾದ ಪುರಾಣ ಶ್ರೇಷ್ಠ ಮಹರ್ಷಿಗಳಿಗೆ ಜನ್ಮ ನೀಡಿದ ನಾಡು ನಮ್ಮದು. ಹೌದು, ಈ ‘ಕಪಿಲ’ ಮಹರ್ಷಿ ಎಂದರೆ ಯಾರು? ಈತನ ಹೆಗ್ಗಳಿಕೆಯೇನು?...

4

ಯುವಕ್ರೀತನ ಜ್ಞಾನೋದಯ

Share Button

ವಿದ್ಯಾರ್ಥಿ ಜೀವನವೆಂದರೆ ಒಬ್ಬ ವ್ಯಕ್ತಿಯ ಜೀವಿತದ ವಸಂತಕಾಲ, ಪ್ರಾಥಮಿಕ ಹಂತದಲ್ಲಿ ಮಕ್ಕಳು; ಹೆತ್ತವರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರೆ ಪ್ರೌಢ ತರಗತಿಗಳಿಗೆ ತಲುಪಿದಾಗ ಸ್ವತಃ ಆಲೋಚನಾ ಶಕ್ತಿ, ವಿಚಾರ, ವಿನಿಮಯ ಬೆಳೆಯುತ್ತದೆ. ಉತ್ಸಾಹ, ಹುಮ್ಮಸ್ಸು ಸುರಿಸುತ್ತದೆ. ಯಾವುದೇ ಒಂದು ಸಾಧನೆಯತ್ತ ಗುರಿಮುಟ್ಟಲು ಯೋಗ್ಯ ತಳಹದಿಯನ್ನು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದೆ...

5

ವೇದವ್ಯಾಸ ಪುತ್ರ ಶುಕ ಮಹರ್ಷಿ

Share Button

ವಿಶ್ವದಲ್ಲೇ ಅತಿಪುರಾತನ ಗ್ರಂಥಗಳು ನಮ್ಮ ಪುರಾಣಗಳಾದ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಗ್ರಂಥಗಳು. ಅನಾದಿಕಾಲದಿಂದಲೂ ಅವುಗಳಿಂದ ತಿಳುವಳಿಕೆಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾ ಬಂದಿದ್ದೇವೆ. ಅವುಗಳಲ್ಲಿ ಉಲ್ಲೇಖಿಸಲ್ಪಟ್ಟ ಕಥೆಗಳು ಎಷ್ಟೋ ಸಾವಿರ ಹಿಂದಿನ ಕಥೆಗಳಾದರೂ ಇಂದಿಗೂ ನಿತ್ಯ ನೂತನವಾಗಿ ಮೆರೆಯುತ್ತವೆ. ಅವುಗಳು ನಮ್ಮ ಬುದ್ಧಿ ಶಕ್ತಿಯನ್ನು ವೃದ್ಧಿಸಿ ವಿವೇಕವನ್ನುನೀಡುತ್ತಿವೆ. ಕಥೆ...

6

ಗಜವದನಾ ಗುಣ ಸದನ

Share Button

ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭಗೊಳ್ಳುತ್ತಿದೆ. ಈ ಮಾಸದ ಮೊದಲ ಹಬ್ಬವೇ ಚೌತಿ. ಯಾವುದೇ ಕಾರ್ಯಕ್ಕೆ ಮೊದಲಾಗಿ ಪ್ರಾರ್ಥಿಸುವುದು ಮಾತ್ರವಲ್ಲ ನಾವು ಪ್ರತಿನಿತ್ಯವೂ ಮೊದಲು ವಂದಿಸುವುದು ಗಣಪತಿಗೆ. ಪ್ರಾರ್ಥಿಸುವಾಗ ದೀಪ ಯಾಕೆ ಬೆಳಗುತ್ತೇವೆ!? ಮೊದಲನೆಯದಾಗಿ ಕತ್ತಲೆ ಹೋಗಲಾಡಿಸುವ ಶಕ್ತಿ ದೀಪಕ್ಕಿದೆ. ಹಾಗೆಯೇ ಜೀವನದಲ್ಲಿ ಸಿರಿ-ಸಂಪತ್ತು, ಸುಖ -ಸಂತೋಷಗಳನ್ನು...

9

ನನ್ನ ಕನಸಿನ ಭಾರತ ಹೀಗಿರಬೇಕು…

Share Button

ಹೆತ್ತ ಮಾತೆಗೆ ಸಮಾನಳಾದ ಓ ನನ್ನ ತಾಯಿ ಭಾರತೀ-ತಾಯಿ ಒಡಲಿನಿಂದ ಭೂಮಿಗೆ ಬಿದ್ದ ಕ್ಷಣದಿಂದ ಸಲಹುವ ತಾಯೇ ನಾನು ನಿನ್ನ ಕುವರಿ. ನಿನ್ನಲ್ಲಿ ಬೇಡಿಕೊಳ್ಳುವ ಅನಂತ ಆಶೀರ್ವಾದಗಳು. ಭಾರತಮಾತೆಯ ಮಕ್ಕಳಾದ ನಾವು ನೂರಮೂವತ್ತು ಕೋಟಿಗಿಂತಲೂ ಅಧಿಕ ಜನರ ಮಹಾತಾಯಿ ನೀನು!.ಅಧಮ್ಯ ಚೇತನದ ಧರಣಿ!!.ಹುಲುಮಾನವರಲ್ಲಿ ಒಬ್ಬಳಾದ ನಾನು ನಿನ್ನ...

4

ಸತ್ಯಕಾಮ ಜಾಬಾಲ

Share Button

ಬಹುಕಾಲದ ಹಿಂದೆ ಪರ್ಣ ಶಾಲೆ ಕಟ್ಟಿಕೊಂಡು ಒಬ್ಬ ಮುನಿಯು ತನ್ನ ಪತ್ನಿಯೊಡನೆ ವಾಸಿಸುತ್ತಾ ತನ್ನ ವ್ರತ ನಿಷ್ಠೆಗಳಲ್ಲಿ ಕಾಲಕಳೆಯುತ್ತಿದ್ದನು. ಅವರಿಗೆ ಓರ್ವ ಪುತ್ರಿ ಜನಿಸಿದಳು. ಆಕೆಗೆ ಜಬಾಲಾ ಎಂದು ಹೆಸರಿಟ್ಟು ಆ ಮುನಿಯು ಅವಳಿಗೆ ತಪೋಧರ್ಮವನ್ನು ಬೋಧಿಸುತ್ತಿದ್ದನು. ಪುತ್ರಿಯು ಮಾತಾ-ಪಿತೃಗಳು ಉಪದೇಶಿಸಿದ ತತ್ವಗಳನ್ನು ಅನುಸರಿಸಿಕೊಂಡು ಜೀವನ ನಡೆಸುತ್ತಿದ್ದಳು,...

4

ಬ್ರಹ್ಮಪುತ್ರ ಪುಲಸ್ತ್ಯ

Share Button

ಸಕಲ ಚರಾಚರ ಸೃಷ್ಟಿಗೆ ಬ್ರಹ್ಮನೇ ಅಧಿಪತಿ. ‘ಬ್ರಹ್ಮಸೃಷ್ಟಿ’ ಎಂಬುದು ಲೋಕೋಕ್ತಿ. ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಯಾಯಿತು ಎಂಬುದು ನಿರ್ವಿವಾದ. ಮಹಾವಿಷ್ಣುವಿನ ಶಕ್ತಿಯಿಂದ ಸಂಪನ್ನನಾದ ಬ್ರಹ್ಮದೇವನು ಸೃಷ್ಟಿ ಮಾಡಲು ಸಂಕಲ್ಪಿಸಿದಾಗ ಮೊದಲಿಗೆ ಬ್ರಹ್ಮನಿಗೆ ಹತ್ತು ಮಂದಿ ಪುತ್ರರು ಜನಿಸಿದರು. ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ. ಪುಲಹ, ಕ್ರತು,ಭೃಗು, ವಸಿಷ್ಠ, ದಕ್ಷ...

8

ಸೂರ್ಯನ ಪುತ್ರ ಯಮ

Share Button

ಯಮ ಎಂಬ ಹೆಸರು ಕೇಳಿದೊಡನೆ ಸಾವಿನ ನೆನಪು ಆವರಿಸಿ ಬಿಡುತ್ತದೆ. ಆಯುಷ್ಯ ಮುಗಿದಾಗ ಯಮದೂತರು ಬಂದು ಪ್ರಾಣವನ್ನು ಎಳೆದೊಯ್ಯುತ್ತಾರಂತೆ. ಯಮಪಾಶಕ್ಕೆ ಕೊರಳೊಡ್ಡಬೇಕಂತೆ ಎಂದೆಲ್ಲ ಕಥೆಗಳಲ್ಲಿ ಕೇಳುತ್ತೇವೆ. ಇಂತಹ ಯಮನೆಂದರೆ ಯಾರು? ಆತನ ಚರಿತ್ರೆಯೇನು? ಆತನಿಗೆ ಜೀವ ಕೊಂಡೊಯ್ಯವ ಕೆಲಸವನ್ನು ಯಾರು ಕೊಟ್ಟರು?ಅವರು ಮೃತ್ಯುದೇವತೆಯೇ? ಸೂರ್ಯ ಹಾಗೂ ದೇವಶಿಲ್ಪಿ...

Follow

Get every new post on this blog delivered to your Inbox.

Join other followers: